ದರ್ಬೆಯಲ್ಲಿ ಶುದ್ಧ ಸಸ್ಯಹಾರಿ ಹೊಟೇಲ್ ಶ್ರೀ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ದರ್ಬೆ ಹಿತ ಆಸ್ಪತ್ರೆ ಎದುರು ಶುದ್ಧ ಸಸ್ಯಹಾರಿ ಹೊಟೇಲ್ ಶ್ರೀ ಫ್ಯಾಮಿಲಿ ರೆಸ್ಟೋರೆಂಟ್ ಸೆ.6ರಂದು ಶುಭಾರಂಭಗೊಂಡಿದೆ.

ಹೊಟೇಲ್ ಮಾಲಕರಾದ ತೇಜಸ್ ಹಾಗೂ ಅಕ್ಷತಾ ತೇಜಸ್ ರವರ ಪುತ್ರಿ ಬೇಬಿ ಮೈರಾ ತೇಜಸ್ ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ದರ್ಬೆ ಶ್ರೀ ಲಕ್ಷ್ಮೀ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಇದರ ಮಾಲಕಿ ಜಯಶ್ರೀ ಆರ್.ಪೈರವರು ದೀಪ ಬೆಳಗಿಸಿ ನೂತನ ಹೊಟೇಲ್ ಉದ್ಯಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಸಂಪ್ಯ ಅಕ್ಷಯ ಕಾಲೇಜು ಚೇರ್ಮನ್ ಜಯಂತ್ ನಡುಬೈಲು, ಪುತ್ತೂರು ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಪ್ರಗತಿಪರ ಕೃಷಿಕ ಹರೀಶ್ ಕೈಪಂಗಳದೋಳ, ಅಗತ್ತಾಡಿ ದೋಳ ಬಾರಿಕೆ ಗರಡಿಯ ಅಧ್ಯಕ್ಷ ಸಂದೀಪ್ ಕೆ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ, ಮಣಿಕಂಠ ಗ್ಯಾಸ್ ಏಜೆನ್ಸಿ ಮಾಲಕ ಅರುಣ್ ಕುಮಾರ್ ರೈ ಆನಾಜೆ, ಹೊಟೇಲ್ ಮಾಲಕ ತೇಜಸ್ ರವರ ತಂದೆ ಅಣ್ಣಿ ಪೂಜಾರಿ ತಾಯಿ ಸುಲೋಚನಾ, ತೇಜಸ್-ಅಕ್ಷತಾ ತೇಜಸ್ ಕುಟುಂಬಸ್ಥರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಹರೀಶ್ ಶಾಂತಿ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್

ನೂತನ ಹೊಟೇಲ್ ಮಾಲಕ ತೇಜಸ್-ಅಕ್ಷತಾ ತೇಜಸ್ ರವರು ಸ್ವಾಗತಿಸಿ ಮಾತರಂ, ಶುದ್ಧ ಸಸ್ಯಹಾರಿ ಹೊಟೇಲ್ ಆಗಿರುವ ನಮ್ಮಲ್ಲಿ ಸೌತ್ ಇಂಡಿಯನ್ ಖಾದ್ಯಗಳು, ನಾರ್ತ್ ಇಂಡಿಯನ್ ಖಾದ್ಯಗಳು, ಐಸ್ ಕ್ರೀಂ, ಫ್ರೆಶ್ ಜ್ಯೂಸ್, ಚಾಟ್ಸ್ ಐಟಂ, ವೆಜ್ ತಂದೂರಿ ಐಟಂ, ವೆಜ್ ಚೈನೀಸ್ ಐಟಂ ದೊರೆಯುತ್ತಿದ್ದು ಗ್ರಾಹಕರು ನಮ್ಮನ್ನು ಪ್ರೋತ್ಸಾಹಿಸಿ ಆಶೀರ್ವದಿಸಬೇಕು ಎಂದು ಸರ್ವರ ಸಹಕಾರ ಕೋರಿದರು

LEAVE A REPLY

Please enter your comment!
Please enter your name here