ಪೆರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಉಪ್ಪಿನಂಗಡಿ: ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಮತ್ತು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಂದು ನಡೆಯಿತು. ಬೆಳಗ್ಗೆ ಶ್ರೀ ಗಣಪತಿ ದೇವರ ವಿಗ್ರಹದ ಪ್ರತಿಷ್ಠೆಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಶ್ರೀ ಗಣಪತಿ ದೇವರ ವಿಗ್ರಹದ ಜಲಸ್ಥಂಭನ ಮೆರವಣಿಗೆ ನಡೆಯಿತು.


ಪೆರಿಯಡ್ಕದಿಂದ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದವರೆಗೆ ಭವ್ಯ ಶೋಭಾಯಾತ್ರೆಯಲ್ಲಿ ಶ್ರೀ ಗಣಪತಿ ದೇವರ ವಿಗ್ರಹವನ್ನು ತಂದು, ದೇವಾಲಯದಲ್ಲಿ ಮಹಾಮಂಗಳಾರತಿಯಾಗಿ ಅಲ್ಲಿನ ಕೆರೆಯಲ್ಲಿ ವಿಗ್ರಹದ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಸಾಗಿ ಬಂದ ಕುಣಿತಾ ಭಜನಾ ತಂಡಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದವು.

ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಪ್ರಸನ್ನ ಕುಮಾರ್ ಪೆರಿಯಡ್ಕ, ಕಾರ್ಯದರ್ಶಿ ದುರ್ಗಾಕುಮಾರ್, ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಉದಯಶಂಕರ ಭಟ್ ನಡುಸಾರು ಪ್ರಮುಖರಾದ ಶಂಕರನಾರಾಯಣ ಭಟ್ ಬೊಳ್ಳಾವು, ಹರಿಪ್ರಸಾದ್ ಭಟ್ ಕುವೆಚ್ಚಾರು, ಪ್ರತಾಪ್ ಪೆರಿಯಡ್ಕ, ನಾರಾಯಣ ಭಟ್ ಪೆರಿಯಡ್ಕ, ಸುರೇಶ್ ಗೌಂಡತ್ತಿಗೆ, ಸುರೇಶ್ ಅತ್ರೆಮಜಲು, ಬಾಲಕೃಷ್ಣ ಶರಣ್ಯ, ರಾಮಣ್ಣ ಶೆಟ್ಟಿ ಬೊಳ್ಳಾವು, ಸುರೇಶ್ ನಲಿಕೆಮಜಲು, ಹರೀಶ್ ಪಟ್ಲ, ಅವನೀಶ್ ಭಟ್ ಪೆರಿಯಡ್ಕ, ಚೇತನ್ ಮೊಗ್ರಾಲ್, ಪ್ರಶಾಂತ್ ಪೆರಿಯಡ್ಕ, ಶೀನಪ್ಪ ಗೌಡ ಬೊಳ್ಳಾವು, ಸೇಸಪ್ಪ ಗೌಡ ಬೊಳ್ಳಾವು, ನೋಣಯ್ಯ ಗೌಡ ಬೊಳ್ಳಾವು, ಲೋಕೇಶ ನೆಕ್ಕರೆ, ಪರಮೇಶ್ವರ ನೆಕ್ಕರೆ, ಆನಂದ ಪೂಜಾರಿ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here