ಕೋಡಿಂಬಾಡಿ: ಗಣಪತಿಗೆ ಬೆಳ್ಳಿ ಹಾರ ಸಮರ್ಪಿಸಿದ ಶಾಸಕ ಅಶೋಕ್ ರೈ ದಂಪತಿ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ನೇತೃತ್ವದಲ್ಲಿ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯುತ್ತಿರುವ 41ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಅವರ ಪತ್ನಿ ಸುಮಾ ಅಶೋಕ್ ರೈ ಯವರು 1 ಕೆ.ಜಿ. ತೂಕದ ಬೆಳ್ಳಿ ಹಾರವನ್ನು ಗಣಪತಿಗೆ ಸಮರ್ಪಿಸಿದರು. ಅರ್ಚಕ ಬಾಲಕೃಷ್ಣ ಐತಾಳ್ ಪ್ರಾರ್ಥನೆ ನೆರವೇರಿಸಿದರು. ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here