ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ತೆನೆ ಹಬ್ಬ, ವಿಶೇಷ ಪೂಜೆ

0

ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗಣಪತಿ ಹೋಮ, ವಿಶೇಷ ಪೂಜೆ, ತೆನೆ ಹಬ್ಬ ಸೆ.7ರಂದು ನಡೆಯಿತು.


ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ವಿಶೇಷ ಪೂಜೆ ಹಾಗೂ ತೆನೆಗೆ ಪೂಜೆ ನೆರವೇರಿಸಿದರು. ಬಳಿಕ ಭಕ್ತರಿಗೆ ತೆನೆ ಹಂಚಲಾಯಿತು. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರಾದ ವಿನಯ ರೈ ಪಟ್ಟೆಕೊಯಿಲ, ಸಂಜೀವ ಗೌಡ ಕೊನೆಮಜಲು, ಅಭಿವೃದ್ದಿ ಸಮಿತಿಯ ಪ್ರಮುಖರಾದ ಚೇತನ್ ಆನೆಗುಂಡಿ, ಭವಾನಿಶಂಕರ ಗೌಡ ಪರಂಗಾಜೆ, ಶಶಿಕುಮಾರ್ ಅಂಬಾ, ದೇವಸ್ಥಾನದ ಕಾರ್ಯದರ್ಶಿ ಅಶೋಕ್ ಪಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here