





ಕಡಬ: ಬೈಕ್ ಗೆ ಪ್ರತ್ಯೇಕ ಹೊಗೆ ಕೊಳವೆಯನ್ನು (ಸೈಲೆನ್ಸರ್) ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುತ್ತಾ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಬೈಕ್ ಸವಾರಿಗೆ ದಂಡ ವಿಧಿಸಿ ಸೈಲೆನ್ಸರ್ ನ್ನು ತೆಗೆಸಿದ ಘಟನೆ ನಡೆದಿದೆ.
ಕಡಬ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಯುವಕರಿಬ್ಬರು ತನ್ನ ಬೈಕ್ ಗಳಿಗೆ ಪ್ರತ್ಯೇಕವಾಗಿ ಹೊಗೆ ಕೊಳವೆಯನ್ನು ಅಳವಡಿಸಿ ಶಬ್ದ ಮಾಲಿನ್ಯ ಮಾಡುತ್ತಿದ್ದ ಪ್ರಶಾಂತ್ ಹಾಗೂ ಕುಮಾರ್ ಎಂಬವರ ಬೈಕನ್ನು ನಿಲ್ಲಿಸಿದ ಕಡಬ ಎಸ್ .ಐ. ಅಭಿನಂದನ್ ಹಾಗೂ ಸಿಬ್ಬಂದಿಗಳು ಬೈಕನ್ನು ವಶಪಡಿಸಿಕೊಂಡು ದಂಡ ವಿಧಿಸಿರುವುದು ಅಲ್ಲದೆ ಸೈಲೆನ್ಸರ್ ನ್ನು ತೆಗೆಸಿ ಬೈಕನ್ನು ಬಿಡುಗಡೆ ಮಾಡಿದ ಘಟನೆ ನಡೆದಿದೆ.









