ತ್ಯಾಗರಾಜನಗರ: ಸ್ಕೂಟರ್ ಅಪಘಾತ, ಸವಾರ ಗಂಭೀರ

0

ಪುತ್ತೂರು: ಸ್ಕೂಟರ್‌ವೊಂದು ಅಪಘಾತಗೊಂಡು ಸವಾರ ಗಂಭೀರ ಗಾಯಗೊಂಡ ಘಟನೆ ಸೆ.10 ರಂದು ಮಧ್ಯರಾತ್ರಿ ತ್ಯಾಗರಾಜನಗರದಲ್ಲಿ ಸಂಭವಿಸಿದೆ.

ಕೆಯ್ಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ ಕೀರ್ತನ್ ಗೌಡ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟೀವಾ ಸ್ಕೂಟರ್ ತ್ಯಾಗರಾಜನಗರದಲ್ಲಿ ಪಲ್ಟಿಯಾಗಿದೆ.

ಪುತ್ತೂರಿನಲ್ಲಿ ಶ್ರೀ ಗಣೇಶನ ಶೋಭಾಯಾತ್ರೆ ನೋಡಿಕೊಂಡು ಮನೆಗೆ ತನ್ನ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸ್ಕೂಟರ್ ಬಿದ್ದ ಶಬ್ದಕ್ಕೆ ಸ್ಥಳೀಯ ಮನೆಯವರು ಆಗಮಿಸಿದ್ದು ಆ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಗಾಯಕ ಬಾಲಕೃಷ್ಣ ನೆಟ್ಟಾರ್‌ರವರು ಗಾಯಾಳುವಿನ ಪರಿಚಯ ಹಿಡಿದು ಮನೆಯವರಿಗೆ ತಿಳಿಸಿದ್ದಾರೆ.

ಕೀರ್ತನ್ ಗೌಡರವರು ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ಅಲ್ಲಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್‌ಗೆ ಯಾವುದೆ ವಾಹನ ಡಿಕ್ಕಿ ಹೊಡೆದು ಹೋಗಿರಬಹುದು ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಸಂಪ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here