ಕೆಯ್ಯೂರು: ಗಣೇಶೋತ್ಸವ , ವೈಭವದಿ ನಡೆದ ಶೋಭಾಯಾತ್ರೆ ‌

0

ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು, ಶ್ರೀ ಗಣೇಶ ಸಮಿತಿ ಕೆಯ್ಯೂರು ಇದರ ಆಶ್ರಯದಲ್ಲಿ ಸೆ.7ರಿಂದ ಸೆ.9ವರೆಗೆ ಕೆಯ್ಯೂರು ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. 

ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ಮತ್ತು ಆನಂದ ಭಟ್, ಸರಳ ಕಾರ್ಯಕ್ರಮಗಳ ಮೂಲಕ ವಿಘ್ನ ವಿನಾಶಕನ ಆರಾಧನೆಯೊಂದಿಗೆ ನಡೆಯಿತು.ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ವಿವಿಧ ಭಜನಾ ತಂಡಗಳಿಂದ ಮೂರು ದಿವಸಗಳ ಕಾಲ ದೇವಳದಲ್ಲಿ ಭಜನಾ ಕಾರ್ಯಕ್ರಮ ಜರಗಿತು.

ಸೆ. 7ರಂದು ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ, ಗಣಪತಿ ಹವನ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆದು,ಸಂಜೆ ವಿದ್ಯಾರ್ಥಿಗಳಿಗೆ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ ನಡೆದು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಭಕ್ತಿ ಗೀತೆ ಸ್ಪರ್ಧೆ ನಡೆದು ಊರವರಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು.

ಸೆ.8ರಂದು ನವ್ಯ ರೆಂಜಲಾಡಿ ಮತ್ತು ತಂಡದಿಂದ ಭಕ್ತಿ ಭಾವ ಜನಪದ ಹಾಡುಗಳು, ಡಾಮಿನೇಶನ್ ಡ್ಯಾನ್ಸ್ ಮತ್ತು ಫಿಟ್ ನೆಸ್ ಸ್ಟುಡಿಯೋ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಸೆ.9ರಂದು  ವಿಜೃಂಭಣೆಯ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು, ವರುಣ ಆರ್ಟ್ಸ್ ಕಲ್ಲಡ್ಕ ಇವರಿಂದ “ಗಣಪತಿಯಿಂದ ಗಜಸುರ ವಧೆ”  ಟ್ಯಾಬ್ಲೊ ಪ್ರದರ್ಶನ ನಡೆದು,  ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ, ಎಂಟು ಭಜನಾ ತಂಡಗಳಿಂದ ಭಜನಾ ಕುಣಿತ, ಶ್ರೀ ರಾಮ ಚೆಂಡೆ ಲಕ್ಷ್ಮೀದೇವಿ ಬೆಟ್ಟ ಪುತ್ತೂರು ಚೆಂಡೆ ಕುಣಿತ ನಡೆದು, ಸುಡುಮದ್ದು ಕಾರ್ಯಕ್ರಮ ನಡೆಯಿತು . ಕೆಯ್ಯೂರು, ಸಂತೋಷ್ ನಗರ ,ಮಾಡಾವು ಕಟ್ಟೆ , ಬೊಳಿಕ್ಕಳದಲ್ಲಿ  ಪೂಜೆ, ನಡೆದು  ಗೌರಿ ಹೊಳೆ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here