ಕಲ್ಲೇಗ ದೈವನರ್ತಕರ ಮನೆಯಲ್ಲಿ ಸಾಮರಸ್ಯದ ಭೋಜನ ಸವಿದ ಚಕ್ರವರ್ತಿ ಸೂಲಿಬೆಲೆ

0

puttur: ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿವೇಕ ವಿಜಯ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಪಥದರ್ಶನದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಕ್ರವರ್ತಿ ಸೂಲಿಬೆಲೆರವರು ಮಧ್ಯಾಹ್ನದ ಭೋಜನಕ್ಕೆ ಪುತ್ತೂರಿನ ದೈವನರ್ತಕ ಹೊನ್ನಪ್ಪ ಕಲ್ಲೇಗರವರ ಮನೆಗೆ ಆಗಮಿಸಿ ಸಾಮರಸ್ಯದ ಭೋಜನ ಸವಿದರು.

ಆರ್‌ಎಸ್‌ಎಸ್ ಪ್ರಾಂತ ಸಾಮರಸ್ಯ ವೇದಿಕೆಯ ಸಂಯೋಜಕ ದಕ್ಷ ರವೀಂದ್ರ, ದೈವನರ್ತಕ ವಸಂತ ಕಲ್ಲೇಗ, ಹೊನ್ನಪ್ಪ ಕಲ್ಲೇಗ, ರಮೇಶ ಕಲ್ಲೇಗ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು, ಶಶಾಂಕ್ ನೆಲ್ಲಿತ್ತಾಯ, ವಿಧ್ಯಾ ಭಾರತಿ ಪ್ರಾಂತ ಪ್ರಮುಖ್ ರಘರಾಜ್ ಉಬರಡ್ಕ, ಕಬಕ ಗ್ರಾಮ ಪಂಚಾಯತ್ ಸದಸ್ಯ ವಿನಯ್ ಕಲ್ಲೇಗ, ಜಯಂತ ಸಪಲ್ಯ ಶೇವಿರೆ, ರೂಪೇಶ್ ಕುಲಾಲ್, ಕೃಷ್ಣ ಶೇವಿರೆ, ಉಮೇಶ್ ಆಚಾರ್ಯ, ದಿವಾಕರ ಪೂಜಾರಿ, ವಾಸು ಕಲ್ಲೇಗ, ಅರುಣ್ ಕಲ್ಲೇಗ, ಸಚಿನ್ ಶೆಣೈ, ರಾಮ್ ಭಟ್, ಶೋಭ ಹೊನ್ನಪ್ಪ, ಯೋಗಿನಿ ರಮೇಶ್, ಜಾನಕಿ ವಸಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here