ಈಶ್ವರಮಂಗಲ: ಕಿಡ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ಯೋಗೀಶ್ ಕುಟುಂಬಕ್ಕೆ ಸಹಾಯ ಧನ

0

ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕು ಅರಿಯಡ್ಕ ವಲಯದ ಈಶ್ವರಮಂಗಲ ಕಾರ್ಯಕ್ಷೇತ್ರದ ತುಳಸಿ ಸಂಘದ ಲಕ್ಷ್ಮಿಯವರ ಮಗ ಯೋಗೀಶ್ ಅವರಿಗೆ ಕಿಡ್ನಿ ಮರುಜೋಡಣೆಗೆ ಕ್ಷೇತ್ರವತಿಂದ ರೂ 30,000 ಮೊತ್ತದ ಮಂಜುರಾತಿ ಪತ್ರವನ್ನು ಒಕ್ಕೂಟ ಅಧ್ಯಕ್ಷ  ದಿನೇಶ್ ರೈ ಕುತ್ಯಾಳ, ಯೋಗೀಶ್ ರವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಜನಜಾಗೃತಿ ಅಧ್ಯಕ್ಷ ವಿಕ್ರಂ ರೈ ಸಾಂತ್ಯ, ವಲಯದ ಭಜನಾ ಪರಿಷತ್ ಅಧ್ಯಕ್ಷ ಗಂಗಾಧರ ರೈ, ಒಕ್ಕೂಟ ದ ಕಾರ್ಯದರ್ಶಿ ರೋಹಿಣಿ, ವಲಯದ ಮೇಲ್ವಿಚಾರಕರು ಹರೀಶ್ ಮತ್ತು ಸೇವಾಪ್ರತಿನಿಧಿ ಗಾಯತ್ರಿ ಉಪಸ್ಥಿತರಿದ್ದರು ಈಗಾಗಲೇ 30 ಸಾವಿರ ಮೊತ್ತವನ್ನು ಯೋಗೀಶ್ ರವರ ಕುಟುಂಬದ ಸದಸ್ಯರ ಅಕೌಂಟ್ ಗೆ ಜಮೆ ಮಾಡಲಾಗಿದೆ ಎಂದು ವಲಯದ ಮೇಲ್ವಿಚಾರಕ ಹರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here