ನೃತ್ಯೋಪಾಸನಾ ಕಲಾ ಅಕಾಡೆಮಿ ವಿಟ್ಲ ಶಾಖೆಯಿಂದ ‘ನೃತ್ಯೋಹಂ’

0

ವಿಟ್ಲ: ಸಿಂಹ ಮಾಸದ ಪ್ರಯುಕ್ತ ವಿಟ್ಲ ಶ್ರೀಭಗವತೀ ದೇವಸ್ಥಾನದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ವಿಟ್ಲ ಶಾಖೆ ವತಿಯಿಂದ ‘ನೃತ್ಯೋಹಂ’ ಭರತನಾಟ್ಯ
ಕಾರ್ಯಕ್ರಮ ಸೆ.13ರಂದು ಏರ್ಪಟ್ಟಿತು.


ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ವಿಟ್ಲ ಶಾಖೆಯ ವಿದ್ಯಾರ್ಥಿಗಳು ನೃತ್ಯ ವೈವಿಧ್ಯ ನಡೆಸಿಕೊಟ್ಟರು. ಶ್ರೀಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್‌.ವಿ. ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅನ್ನಪೂರ್ಣ ಪರಿಚಯಿಸಿದರು. ರಶ್ಮಿ ಕೃಷ್ಣ ವಂದಿಸಿದರು. ಡಾ.ಮೈತ್ರಿ ಭಟ್‌ ನಿರೂಪಿಸಿದರು.
ಹಿಮೇಳದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್‌ ನಟುವಾಂಗ, ಅಭಿಷೇಕ್‌ ಬಂಗೇರ ಹಾಡುಗಾರಿಕೆ, ವಿದ್ವಾನ್‌ ಬಾಲಕೃಷ್ಣ ಎಚ್‌.ಮೃದಂಗ ಹಾಗೂ ವಿದ್ವಾನ್‌ ರಾಹುಲ್‌ ಕಣ್ಣೂರು ಕೊಳಲಿನಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here