ಕೆಮ್ಮಾರ ಮುದಲೆಗುಂಡಿ ಶ್ರೀಗಣೇಶ ಕಟ್ಟೆ ಪೂಜಾ ಸಮಿತಿಯ ಗಣೇಶೊತ್ಸವ

0

ಪುತ್ತೂರು: ಉಪ್ಪಿನಂಗಡಿಯ ಕೆಮ್ಮಾರ ಮುದಲೆಗುಂಡಿ ಶ್ರೀಗಣೇಶ ಕಟ್ಟೆ ಪೂಜಾ ಸಮಿತಿ ಆಶ್ರಯದಲ್ಲಿ ನಡೆದ ಗಣೇಶ ವಿಗ್ರಹ ಜಲಸ್ಥಂಭನ ಕಾರ್ಯಕ್ರಮದಲ್ಲಿ ಗಣೇಶ ಕಟ್ಟೆ ಪೂಜಾ ಸಮಿತಿಯ ಸಕ್ರಿಯ ಸದಸ್ಯರಿಗೆ ನೀಡಲಾಗುವ ಟಿ-ಶರ್ಟ್(ಜೆರ್ಸಿ) ಬಿಡುಗಡೆ ಹಾಗೂ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಸಂಜೆ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಣೆ ನಡೆಯಿತು. ಸಮಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಬಡ್ತಿಲ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್. ನೆಕ್ಕರಾಜೆ, ವಸಂತ ಕೋಟ್ಯಾನ್ ಮತ್ತು ಸಮಿತಿಯ ಹಿರಿಯರು ಹಾಗೂ ಸದಸ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟನೆಗೊಂಡಿತು.


ರಮೇಶ್ ಪರ್ದಾಜೆ ಗಣಪತಿ ಸ್ತುತಿ ಮಾಡಿ ಚಾಲನೆ ನೀಡಿದರು. ಗಣೇಶನ ವಿಗ್ರಹಕ್ಕೆ ಮಹಾಮಂಗಳಾರತಿ ನಡೆದ ನಂತರ ಮುದಲೆಗುಂಡಿ ನದಿಯಲ್ಲಿ ಗಣೇಶನ ವಿಗ್ರಹ ಜಲಸ್ಥಂಭನ ಕಾರ್ಯಕ್ರಮ ನಡೆಯಿತು. ಪ್ರಕಾಶ್ ಕೆಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಿತಿಯ ಸಂಚಾಲಕ ಯಶವಂತ್ ಜಿ. ಗುಂಡ್ಯ, ಸದಾನಂದ ಶೆಟ್ಟಿ ಗುತ್ತು, ಗಂಗಾಧರ ಪಿ.ಎನ್., ರಾಮಕುಂಜ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶರತ್ ರಾಮಕುಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here