ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು ಇದರ ವತಿಯಿಂದ  ಸನ್ಮಾನ

0

ವಿಟ್ಲ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ  ಸಂಘ ನಿ. ಪುತ್ತೂರು ಇದರ ವತಿಯಿಂದ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ರಿ ವಿಟ್ಲ ಇದರ ಅಧ್ಯಕ್ಷ ಸಿ.ಕೆ ಗೌಡ, ವಿಟ್ಲ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷ  ಕರುಣಾಕರ ಗೌಡ ನಾಯ್ತೊಟ್ಟು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ, ವಿಟ್ಲ ಶಾಖಾ ಸಲಹಾ ಸಮಿತಿ ಸದಸ್ಯರಾದ ಪುನೀತ್ ಮಾಡತ್ತಾರುರವರನ್ನು ವಿಟ್ಲ ಶಾಖೆಯಲ್ಲಿ ಸನ್ಮಾನಿಸಲಾಯಿತು. 

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ  ಸಂಘ ನಿ. ಪುತ್ತೂರು ಇದರ ಅಧ್ಯಕ್ಷರಾದ ಚಿದಾನಂದ ಬೈಲಾಡಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶುಭಹಾರೈಸಿದರು.  

ಒಕ್ಕಲಿಗ ಸಹಕಾರ ಪತ್ತಿನ ಸಂಘ ನಿ. ಪುತ್ತೂರು ಇದರ ನಿರ್ದೇಶಕರು, ವಿಟ್ಲ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಗೌಡ ಕರ್ಮಲ, ಒಕ್ಕಲಿಗ ಸಹಕಾರ ಪತ್ತಿನ ಸಂಘ ನಿ. ಪುತ್ತೂರು ಇದರ ನಿರ್ದೇಶಕರು,  ವಿಟ್ಲ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರಾದ ಜಿನ್ನಪ್ಪ ಗೌಡ ಮಳುವೇಲು, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ವಿಟ್ಲ ಶಾಖಾ ಸಲಹಾ ಸಮಿತಿ ಸದಸ್ಯರಾದ  ಸದಾನಂದ ಗೌಡ ಸೇರಾಜೆ, ತೀರ್ಥರಾಮ .ಬಿ ಸೇನರಮಜಲು, ಚಂದಪ್ಪ ಗೌಡ ಪೈಸಾರಿ, ರಾಘವ ಗೌಡ ಕಡಂಬುಬನ, ವಿಶ್ವನಾಥ ನಾಯ್ತೊಟ್ಟು, ಪ್ರೇಮಲತಾ ಜಿ. ಹಡೀಲು, ಪ್ರಮುಖರಾದ ಶಿವರಾಮ ಗೌಡ ಮಲಾರು, ಸೇಸಪ್ಪ ಗೌಡ ಹಡೀಲು ಮೊದಲಾದವರು ಉಪಸ್ಥಿತರಿದ್ದರು.

ವಿಟ್ಲ ಶಾಖಾ ವ್ಯವಸ್ಥಾಪಕರಾದ  ದಿನೇಶ್ ಪೆಲತ್ತಿಂಜ ವಂದಿಸಿದರು.  ಸಿಬ್ಬಂದಿಗಳು ಹರಿಣಾಕ್ಷಿ, ಪ್ರಕಾಶ್ ಬಿ. , ಪುತ್ತೂರು ಎಪಿಎಂಸಿ ಶಾಖೆಯ ಸಿಬ್ಬಂದಿ ಯಶ್ವಿತ್ , ಮೊದಲಾದವರು ಸಹಕಾರಿಸಿದರು.

LEAVE A REPLY

Please enter your comment!
Please enter your name here