ಪೌರ ಕಾರ್ಮಿಕರ ದಿನಾಚರಣೆಯಂಗವಾಗಿ ಪುತ್ತೂರಿನ ಸದ್ಗುರು ಲಾಜಿಸ್ಟಿಕ್‌ನಿಂದ ಕುಕ್ಕರ್ ಕೊಡುಗೆ

0

ಪುತ್ತೂರು: ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪುತ್ತೂರು ಏಳ್ಮುಡಿಯಲ್ಲಿರುವ ಸದ್ಗುರು ಲಾಜಿಸ್ಟಿಕ್ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಕುಕ್ಕರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.


ಸೆ.22ರಂದು ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ಸಂಸ್ಥೆಯ ಮಾಲಕ ಹಾಲಯ್ಯ ಅವರು ಪೌರ ಕಾರ್ಮಿಕರಿಗೆ ಕುಕ್ಕರ್ ವಿತರಿಸಿ ಮಾತನಾಡಿ ನಾನು ಪುತ್ತೂರು ನಗರದ ಸ್ವಚ್ಛತೆಯನ್ನು ತುಂಬಾ ಚೆನ್ನಾಗಿ ಮಾಡುತ್ತಿರುವ ಪೌರ ಕಾರ್ಮಿಕರ ಶ್ರಮವೇ ದೊಡ್ಡ ಕೊಡುಗೆ. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರ ಶ್ರಮಕ್ಕೆ ತನ್ನದೊಂದು ಕೊಡುಗೆ ನೀಡಬೇಕೆಂದು ಅನಿಸಿತ್ತು. ಅದನ್ನು ಕುಕ್ಕರ್ ರೂಪದಲ್ಲಿ ನೀಡುತ್ತಿದ್ದೇನೆ ಎಂದರು. ಈ ಸಂದರ್ಭ ಹಾಲಯ್ಯ ಅವರ ಪತ್ನಿ, ಮಕ್ಕಳು ಜೊತೆಯಲ್ಲಿದ್ದರು. ಪೌರಯುಕ್ತ ಮಧು ಎಸ್ ಮನೋಹರ್, ನಗರಸಭೆಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here