ಪೆರ್ಲಂಪಾಡಿಯ ಅಲಸಂಡೆಮಜಲು ಭರತೇಶ್ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನಕ್ಕೆ ಆಯ್ಕೆ

0

ಪುತ್ತೂರು:ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಅಲಸಂಡೆಮಜಲು ನಿವಾಸಿ ಭರತೇಶ ಅವರು ಅ.4 ಮತ್ತು 5ರಂದು ಹೈದರಾಬಾದ್‌ನಲ್ಲಿ ನಡೆಯುವ ಮೂರನೇ ‘ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನ-2024’ಕ್ಕೆ ಆಯ್ಕೆಯಾಗಿದ್ದಾರೆ.


ವಿಕಿಮೀಡಿಯ ಫೌಂಡೇಶನ್, ಮೀಡಿಯಾ ವಿಕಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತ ಸರಕಾರ ಇದರ ಜಂಟಿ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ಭರತೇಶ್ ಅವರು ಭಾಗವಹಿಸಲು ಆಯ್ಕೆಯಾಗಿದ್ದಾರೆ.ಭರತೇಶ್ ಅವರು ‘ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಮಂಗಳೂರು’ ಇದರ ಸಕ್ರಿಯ ಸದಸ್ಯರಾಗಿದ್ದು, ತುಳು ವಿಕಿಪೀಡಿಯಾದ ನಿರ್ವಾಹಕರೂ ಆಗಿದ್ದಾರೆ.ಇತ್ತೀಚೆಗೆ ಜರ್ಮನಿಯಲ್ಲಿ ಜರುಗಿದ ‘ವಿಕಿ ಸಮಿತ್-2024’ರಲ್ಲಿ ಇವರು ತುಳು ಭಾಷೆಯನ್ನು ಪ್ರತಿಸಿನಿಧಿಸಿದ್ದರು.ತುಳು ಮತ್ತು ಕನ್ನಡ ಬರಹಗಾರರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾಗಿರುವ ಇವರು ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಉದ್ಯೋಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here