ನಿವೃತ್ತ ಪೋಸ್ಟ್ ಮಾಸ್ಟರ್ ಮಂಜುನಾಥ ಆಚಾರ್ಯರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಮುಖ್ಯ ರಸ್ತೆಯ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ದರ್ಬೆ ಸಿಟಿಒ ನಿವಾಸಿ ಮಂಜುನಾಥ ಆಚಾರ್ಯರವರ ವಿಶ್ವಕರ್ಮ ಬ್ರಾಹ್ಮಣ ಸಮಾರಾಧನೆ ಉತ್ತರಕ್ರಿಯೆ ಸದ್ಗತಿ ಕಾರ್ಯವು ಸೆ.26 ರಂದು ಕಲ್ಲಾರೆ ಗುರು ರಾಘವೇಂದ್ರ ಮಠದಲ್ಲಿ ಜರಗಿತು.

ಪುರೋಹಿತ್ ಅರವಿಂದ್ ಮಾಣಿರವರು ಮಾತನಾಡಿ, ಅಗಲಿದ ಮಂಜುನಾಥ ಆಚಾರ್ಯರವರು ಬದುಕಿನಲ್ಲಿ ಸ್ನೇಹಮಯ ವ್ಯಕ್ತಿತ್ವ, ಸರಳತೆಯಿಂದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾ, ಚೈತನ್ಯದ ಚಿಲುಮೆಯಾಗಿ ಸಾರ್ಥಕ ಬದುಕನ್ನು ಸಾಗಿಸಿ ಇದೀಗ ನಮ್ಮನ್ನಗಲಿದ್ದಾರೆ. ಅಗಲಿದ ನಿಮ್ಮ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಅಗಲಿದ ಮಂಜುನಾಥ ಆಚಾರ್ಯರವರ ಪುತ್ರ ಪ್ರೇಮನಾಥ್ ಎಂ, ಸೊಸೆಯಂದಿರಾದ ಪ್ರಭಾ ಎನ್.ಎಸ್, ರಶ್ಮಿ ಎಸ್, ಪುತ್ರಿಯರಾದ ನಂದ ವಸಂತ್, ಪ್ರಭಾ ಪ್ರಕಾಶ್, ಅಳಿಯ ವಸಂತ್ ಎ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾವಚಿತ್ರಕ್ಕೆ ಪುಷ್ಪಾರ್ಚನೆ..
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು, ಹಿತೈಷಿಗಳು ಅಗಲಿದ ಮಂಜುನಾಥ ಆಚಾರ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here