ಮೊಟ್ಟೆತ್ತಡ್ಕ: ಲಾರಿ ಚಾಲಕ ಚಂದ್ರಶೇಖರ ನಿಧನ

0

ಪುತ್ತೂರು: ಮೊಟ್ಟೆತ್ತಡ್ಕ ನಿವಾಸಿ, ಲಾರಿ ಚಾಲಕರಾಗಿದ್ದ ಚಂದ್ರಶೇಖರ(75ವ.)ರವರು ದೀರ್ಘಕಾಲದ ಅಸೌಖ್ಯದಿಂದ ಸೆ.26 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತ ಚಂದ್ರಶೇಖರ್ ರವರು ಹಲವಾರು ವರ್ಷಗಳಿಂದ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರು. ಪಾರ್ಶ್ವವಾಯುಗೆ ಒಳಗಾಗುವ ಮುನ್ನ ಸುಮಾರು ಹದಿನೈದು ವರ್ಷಗಳಕ್ಕೂ ಮಿಕ್ಕಿ ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಲ್ಲಿ ಹಾಗೂ ಇತರೆಡೆ ಲಾರಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಪತ್ನಿ ಕಮಲ, ಪುತ್ರ ಪ್ಲಂಬರ್ ವೃತ್ತಿ ನಿರ್ವಹಿಸುತ್ತಿರುವ ಹರೀಶ್, ಪುತ್ರಿ ಕವಿತಾ, ಅಳಿಯ ಸುಧಾಕರ್, ಸೊಸೆ ಸುಮಿತರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here