ಅ.1: ಆನಂದಾಶ್ರಮ ವಠಾರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನದ ಸಂಭ್ರಮಾಚರಣೆ

0

ಪುತ್ತೂರು: ಆನಂದಾಶ್ರಮ ಸೇವಾ ಟ್ರಸ್ಟ್ ಸಂಪ್ಯ ಪುತ್ತೂರು ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನದ ಸಂಭ್ರಮಾಚರಣೆ ಅ.1 ರಂದು ಅಪರಾಹ್ನ 3.30 ರಿಂದ ಆನಂದಾಶ್ರಮದ ವಠಾರದಲ್ಲಿ ನಡೆಯಲಿದೆ.

ಉದ್ಯಮಿ ಪಿ. ಶ್ರೀನಿವಾಸ್ ಪೈ ಗೌರವ ಉಪಸ್ಥಿತರಿರುವರು. ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ ಸಭಾಧ್ಯಕ್ಷತೆ ವಹಿಸಲಿದ್ದು, ನ್ಯಾಯವಾದಿ ಮಹೇಶ್ ಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಯಮಿಗಳು ಹಾಗೂ ಸಮಾಜ ಸೇವಕ ಕುಂಬ್ಳೆ ಗಿರಿಧರ್ ಶೆಣೈ ಹಾಗೂ ವಿಶ್ರಾಂತ ಪ್ರಾಚಾರ್ಯರು ಹಾಗೂ ಬರಹಗಾರ ವಿ.ಬಿ ಅರ್ತಿಕಜೆ ಯವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here