ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈವರಿಗೆ ಜಗದಂಬಾ ಯಕ್ಷ ಸೌರಭ ಪ್ರಶಸ್ತಿ

0

ಪುತ್ತೂರು: ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈವರಿಗೆ ಜಗದಂಬಾ ಯಕ್ಷ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡೊಂಬಿವಲಿ ಜಗದಂಬಾ ಮಂದಿರದ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ ಯಕ್ಷಕಲಾ ಸಂಸ್ಥೆಯ ವತಿಯಿಂದ ನಡೆದ ಯಕ್ಷಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಡಬ ತಾಲೂಕು ಮರ್ದಾಳ ಸಮೀಪದ ಕೊಡಂದೂರು ರಾಮಣ್ಣ ರೈ ಮತ್ತು ಕುಸುಮಾವತಿ ದಂಪತಿ ಪುತ್ರರಾದ ಇವರು ಪ್ರಸ್ತುತ ಬಪ್ಪನಾಡು ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here