ಕೆಪಿಎಸ್  ಕೆಯ್ಯೂರಿನಲ್ಲಿ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

0

ಕೆಯ್ಯೂರು: ಕೆಪಿಎಸ್‌ ಕೆಯ್ಯೂರು ಶಾಲೆಯಲ್ಲಿ ಸತ್ಯ ಸಾಯಿ ಸೇವಾ ಸಮಿತಿ, ಪುತ್ತೂರು ಇದರ ವತಿಯಿಂದ ಕೆಪಿಎಸ್ ಕೆಯ್ಯೂರು ಪ್ರೌಢಶಾಲಾ ವಿಭಾಗ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯು ಅ.2ರಂದು ಕೆಪಿಎಸ್ ಕೆಯ್ಯೂರು ಎಸ್ ಡಿಎಂಸಿ ಕಾರ್ಯಧ್ಯಕ್ಷ ಎ.ಕೆ ಜಯರಾಮ ಕೆಯ್ಯೂರು ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ  ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇದರ ಸಂಚಾಲಕ ದಯಾನಂದ ಕೆ ಎಸ್, ಜಿಲ್ಲಾಧ್ಯಕ್ಷ  ಪ್ರಸನ್ನ ಎನ್ ಭಟ್, ಆಧ್ಯಾತ್ಮಿಕ ಸಂಯೋಜಕ ದಾಮೋದರ ಎಂ, ಮಾಜಿ ಸಂಚಾಲಕ ರಘುನಾಥ ರೈ, ಕೆಯ್ಯೂರು  ಸಮಿತಿ ಸದಸ್ಯ ಶ್ರೀಧರ ಪೂಜಾರಿ ಕೊಡಂಬು, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಕೆಪಿಎಸ್ ಕೆಯ್ಯೂರು ಆಂಗ್ಲಭಾಷಾ ಉಪನ್ಯಾಸಕ ಬಾಲಕೃಷ್ಣ ಬೇರಿಕೆ,ವಿಶ್ವನಾಥ ಪೂಜಾರಿ ಕೆಂಗುಡೇಲು, ಜಯಪ್ರಶಾಂತ್, ಸತ್ತಾರ್ ಕೆಯ್ಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here