ಕೆಯ್ಯೂರು: ಪ್ರಾಕೃತಿಕ ವಿಕೋಪ, ಗ್ರಾಮಾಭಿವೃದ್ದಿ ಯೋಜನೆಯಿಂದ ಧನ ಸಹಾಯ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾನಿಧ್ಯ ಸಂಘದ ಸದಸ್ಯರಾದ ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಅಣ್ಣು ಇವರ ಮನೆಯು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆಯ ಛಾವಣಿಯು ಬಿದ್ದು ಹಾನಿಯಾಗಿತ್ತು. ಈ ಬಗ್ಗೆ ಅಣ್ಣುರವರು ಪರಿಹಾರಕ್ಕಾಗಿ ಯೋಜನೆಗೆ ಮನವಿ ಮಾಡಿಕೊಂಡಿದ್ದರು. ಇವರ ಮನವಿಗೆ ಸ್ಪಂದನೆ ನೀಡಿದ ಖಾವಂದರು ರೂ 25,೦೦೦ ಸಹಾಯ ಧನವನ್ನು ಮಂಜೂರುಗೊಳಿಸಿದ್ದು ಇದರ ಮಂಜೂರಾತಿ ಪತ್ರದ ವಿತರಣೆಯನ್ನು ಪುತ್ತೂರು ತಾಲೂಕಿನ ಯೋಜನಾಧಿಕಾರಿಗಳಾದ ಶಶಿಧರ್ ಎಂ ರವರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಬೇಬಿ ಪೂಜಾರಿಯವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಕುಂಬ್ರ ವಲಯಾಧ್ಯಕ್ಷರಾದ ಎಸ್ ಮಾಧವ ರೈ, ಮೇಲ್ವಿಚಾರಕರಾದ ಶುಭವತಿ, ನಿಕಟ ಪೂರ್ವ ಅಧ್ಯಕ್ಷರಾದ ಬಾಬು ಪಾಟಾಳಿ, ಸೇವಾಪ್ರತಿನಿಧಿ ಲತಾ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here