ಪುತ್ತೂರು:ಅ.5: ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರ ಅ.5ರಂದು ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಅರಿವು ಕೃಷಿ ಕೇಂದ್ರದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ರಿಂದ ನೋಂದಾವಣೆ ನಡೆಯಲಿದ್ದು, ಬೆಳಿಗ್ಗೆ 10ರಿಂದ ಅಪರಾಹ್ನ 1.00 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ.ಅದೇ ದಿನ ಅಪರಾಹ್ನ 2.00ರಿಂದ 4.00 ಗಂಟೆಯವರೆಗೆ ಪ್ರತಿಯೊಬ್ಬರ ದಾಖಲಾತಿ ಜೋಡಣೆ ಮತ್ತು ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿತೆ (ಇದರಲ್ಲಿ ಮಾತ್ರ ಭಾಗವಹಿಸಲು ಇಚ್ಛಿಸುವವರು ಪ್ರತ್ಯೇಕ ನೋಂದಾವಣೆ ಮಾಡಿಕೊಳ್ಳಿ)ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ‘ಯೋಜನೆಯ ಸತೀಶ್ ಮಾಬೆನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 8050293990 | 8050294039 | 6364570738 ಸಂಪರ್ಕಿಸಬಹುದು.
ಉದ್ಯಮ ಶೀಲತೆಯ ಬಗ್ಗೆ ಮಾಹಿತಿ
ನಮ್ಮ ಊರಿನಲ್ಲಿ ಮಾಡಬಹುದಾದ ಉದ್ದಿಮೆಗಳು
ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಹಾಗೂ ಇರುವ ಅನುಕೂಲತೆಗಳು
ಅವಶ್ಯವುಳ್ಳ ಯಂತ್ರೋಪಕರಣಗಳ ಬಗ್ಗೆ ಮಾಹಿತಿ
ಅದನ್ನು ಪಡೆಯುವ, ಅದು ದೊರಕುವ ಬಗ್ಗೆ ಮಾಹಿತಿ
ಸಾಲ ಮತ್ತು ಸಬ್ಸಿಡಿ ಪಡೆಯುವ ಬಗ್ಗೆ ಮಾಹಿತಿ
ಉತ್ಪಾದನೆಯನ್ನು ವರ್ಧಿಸುವುದು, ಅದರ ಗುಣಮಟ್ಟ ಕಾಪಾಡುವಿಕೆ
ಉತ್ಪಾದನೆಯ ಮಾರುಕಟ್ಟೆ, ಬ್ಯಾಂಡ್ ವಿಸ್ತರಣೆಯ ಮಾಹಿತಿ ದೊರೆಯಲಿದೆ.