ಕಾವು ವಿದ್ಯುತ್ ಉಪಕೇಂದ್ರದಲ್ಲಿ‌ ಆಯುಧ ಪೂಜೆ

0

ಪುತ್ತೂರು:ಕಾವು 33/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ‌ ಅ.4 ರಂದು ಪಂಚಲಿಂಗೇಶ್ವರ ದೇವಸ್ಥಾನ ಕಾವು ಇದರ ಅರ್ಚಕರಾದ ಶಿವಪ್ರಸಾದ್ ಕಡಮಣ್ಣಾಯರವರ ಮಾರ್ಗ ದರ್ಶನದಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು.

ಪೂರ್ವಾಹ್ನ ಗಣಪತಿ ಹೋಮ, ದೇವಿ ಪೂಜೆ, ವಾಹನ ಪೂಜೆ, ಆಯುಧ ಪೂಜೆ ಕಾರ್ಯಗಳು ನಡೆಯಿತು .ಸಬ್ ಸ್ಟೇಷನ್ ಆಪರೇಟರ್ ರಾಮಚಂದ್ರ ಗೌಡ ದಂಪತಿಗಳು ಪೂಜಾ ಕಾರ್ಯಕ್ರಮದ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.ವಿವಿಧ ಮೆಸ್ಕಾಂ ಕಛೇರಿಗಳಿಂದ ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.ಸ್ಟೇಷನ್ ಕಿರಿಯ ಅಭಿಯಂತರಾದ ಉಷಾ ಎಸ್, ಅಪರೇಟರ್ ಗಳಾದ ಹರೀಶ್ ಪಿ , ಜಯಪ್ರಕಾಶ್ ನಾಯ್ಕ,ಮನೋಜ್ ಟಿ.ಎಂ, ಶ್ರೀಧರ್ ಎನ್, ರಾಜೇಂದ್ರ ಕೆ, ಸತೀಶ್ ಬಿ ಸಹಕರಿಸಿದರು.

LEAVE A REPLY

Please enter your comment!
Please enter your name here