ನಾಳೆ(ಅ.5): ಮಂಗಳೂರು ದಸರಾದಲ್ಲಿ ಪುತ್ತೂರು ಸೋನಿಕ ಜನಾರ್ದನ್ ಬಳಗದಿಂದ ಭಕ್ತಿ ಸಂಗೀತ 

0

ಪುತ್ತೂರು: ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಅ.5ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 7ಗಂಟೆಯ ವರೆಗೆ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪುತ್ತೂರು ಸೋನಿಕ ಜನಾರ್ದನ್ ಮತ್ತು ಬಳಗದವರು ನಡೆಸಿ ಕೊಡಲಿದ್ದಾರೆ. ಗಾಯನದಲ್ಲಿ ಸೋನಿಕ ಜನಾರ್ದನ್, ಅಶ್ಮಿತ್  ಎ.ಜೆ ಸಹಕರಿಸದಲ್ಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ವಿ.ಜೆ ಅಶ್ವಿನಿ ಪೆರುವಾಯಿ ಮಾಡಲಿದ್ದು ಹಿನ್ನೆಲೆ ಸಂಗೀತದಲ್ಲಿ ಶಿವಾನಂದ ಉಪ್ಪಳ (ಕೀಬೋರ್ಡ್) ಜಗದೀಶ್ ಮಂಗಲ್ಪಾಡಿ (ತಬಲ )ಜಯಶಂಕರ್ ಪುಣಚ ( ರಿಥಮ್ ಪೆಡ್) ಸಹಕರಿಸಲಿದ್ದಾರೆ. ಸೋನಿಕಾ ಜನಾರ್ದನ್ ರವರು ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ ಬಿ ಪುತ್ತೂರುರವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here