ವೀರಮಂಗಲ ಪಿ ಎಂ ಶ್ರೀ ಶಾಲೆಯಲ್ಲಿ ಗಣಹೋಮ‌, ಶಾರದಾ ಪೂಜೆ

0

ಪುತ್ತೂರು : ಪಿಎಂಶ್ರೀ ಶಾಲೆ ವೀರಮಂಗಲದಲ್ಲಿ ಶಾರದಾ ಪೂಜೆ ಮತ್ತು ಗಣಹೋಮವು ಅರ್ಚಕ ರಾಧಾಕೃಷ್ಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಸವಣೂರು ಯುವಕ ಮಂಡಲದ ರಾಜೇಶ್ ರೈ ಮುಗೇರು ಮತ್ತು ಶ್ರೀಧರ ಸುಣ್ಣಾಜೆ ಹಾಗೂ ಡೋಲಕ್ ನಲ್ಲಿ ಸುಧಾಕರ ಕುಲಾಲ್ ಭಜಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಅನುಪಮ ಉಪಾಧ್ಯಕ್ಷ ರಝಾಕ್, ಸದಸ್ಯರಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ,ಭವ್ಯಾ,ಶಾಂಬಲತಾ, ರಾಜೇಶ್ವರಿ, ಚಿತ್ರಾ, ಪದ್ಮಾವತಿ, ರತ್ನಾವತಿ,ಚಿತ್ರಾ,ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.

ಅಡುಗೆ ಸಿಬ್ಬಂದಿಗಳು, ತಾಯಂದಿರ ಸಮಿತಿಯವರು, ಪೋಷಕರು, ಶಾಲಾ ಮುಖ್ಯಗುರು ತಾರಾನಾಥ ಸವಣೂರು ಶಿಕ್ಷಕರಾದ ಶ್ರೀಲತಾ, ಶಿಲ್ಪರಾಣಿ, ಸೌಮ್ಯ, ಎಲ್ ಕೆ ಜಿಯ ಸಂಚನಾ, ಚಂದ್ರಾವತಿ ಭಾಗವಹಿಸಿದರು.

LEAVE A REPLY

Please enter your comment!
Please enter your name here