ಪುತ್ತೂರು: ಅ.12 ರಂದು ಸಂಜೆ ಜರಗುವ ಪುತ್ತೂರು ಶಾರದೋತ್ಸವದ ವೈಭವದ ಮೆರವಣಿಗೆಯಲ್ಲಿ ಸರ್ವ ಹಿಂದೂ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮನವಿ ಮಾಡಿದ್ದಾರೆ.
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ:
ಈ ಬಾರಿಯ ಶೋಭಾಯಾತ್ರೆಯಲ್ಲಿ ಪುತ್ತೂರಿನ ಜನತೆ ಹಿಂದೆಂದೂ ಪ್ರತ್ಯಕ್ಷ ವೀಕ್ಷಿಸಿರದ ಕೇರಳದ ಕಲಾತಂಡಗಳಿಂದ ಪಂದಳಾಟ , ಕಥಕಳ್ಳಿ , ತಿರಾಯಾಟ್ಟಮ್ , ಸಿಂಗಾರಿ ಕಾವಡಿ , ಮಹಿಳಾ ಸಿಂಗಾರಿ ಮೇಳಂ , ಬೃಹತ್ ಹನುಮಾನ್ , ಘಟೋತ್ಗಜ ಮುಂತಾಗಿ , ಕುಣಿತ ಭಜನಾ ತಂಡಗಳು , ವೇದಘೋಷ , ವಾದ್ಯಘೋಷ , ಚಂಡೆಮೇಳ , ಮಹಿಳಾ ವೀರಗಾಸೆ , ಕಹಳೆ , ಡೊಳ್ಳುಕುಣಿತ , ವೀರಭದ್ರ , ಜುಗ್ಗಿಲಿಗಿ ಮೇಳ ಮೆರವಣಿಗೆಯ ರಂಗು ಹೆಚ್ಛಿಸಲಿದೆ. ಕ್ಲಪ್ತ ಸಮಯವನ್ನು ನಿಭಾಯಿಸಿ ಡಿ.ಜೆ , ಪಟಾಕಿ ಸದ್ಧಿಗೆ ಅವಕಾಶ ನೀಡದೇ ಮೆರವಣಿಗೆಯು ಸಾಗಲಿದೆ ಎಂದು ಅವರು ತಿಳಿಸಿದ್ದಾರೆ.