ಕೆಯ್ಯೂರು: ಉಚಿತ ಟೈಲರಿಂಗ್ ತರಬೇತಿ, ಸರ್ಟೀಫಿಕೇಟ್ ವಿತರಣೆ

0

ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ(ಉತ್ತರ) ಮತ್ತು ಶ್ರೀ ಸತ್ಯಸಾಯಿ ಕೌಶಲ್ಯ ಅಭಿವೃದ್ಧಿ ಕಾರ್ಯದಡಿಯಲ್ಲಿ ಶ್ರೀ ದುರ್ಗಾ ಯುವಕ ಮಂಡಲ ಕೆಯ್ಯೂರು ಇದರ ಸಹಕಾರದೊಂದಿಗೆ ನಡೆಯುತ್ತಿರುವ ಉಚಿತ ಟೈಲರಿಂಗ್ ತರಬೇತಿಯ 5 ನೇ ಬ್ಯಾಚ್‌ಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ಹಾಗೂ 6 ನೇ ಬ್ಯಾಚ್‌ನ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ದ.ಕ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್‌ರವರು 6 ನೇ ಬ್ಯಾಚ್ ಅನ್ನು ಉದ್ಘಾಟಿಸಿದರು. ಪುತ್ತೂರು ತಾಲೂಕು ಸಂಚಾಲಕ ದಯಾನಂದ ಕೆ.ಎಸ್ ಮತ್ತು ಶೈಕ್ಷಣಿಕ ವಿಭಾಗದ ಸಂಯೋಜಕರಾದ ಮೂಕಾಂಬಿಕ ಎನ್.ರಾವ್‌ರವರು 5 ನೇ ಬ್ಯಾಚ್ ಪೂರೈಸಿದ್ದಕ್ಕೆ ತರಬೇತುದಾರರಾದ ಮೀನಾಕ್ಷಿ ವಿ.ರೈಯವರನ್ನು ಅಭಿನಂದಿಸಿದರು.

ಮಹಿಳಾ ವಿಭಾಗದ ಯುವ ಸಂಯೋಜಕಿ ವೀಣಾ ಭಟ್‌ರವರು ಸಂಸ್ಥೆಯ ಸೇವೆ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿವುದರ ಬಗ್ಗೆ ಮಾಹಿತಿ ನೀಡಿದರು. ಮೀನಾಕ್ಷಿ ವಿ.ರೈ 5 ನೇ ಬ್ಯಾಚ್‌ನ ವರದಿ ವಾಚಿಸಿದರು. ಪ್ರಸನ್ನ ಭಟ್ ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮಾಜಿ ಸಂಚಾಲಕ ರಘುನಾಥ ರೈ, ಉಸ್ತುವಾರಿ ಶ್ರೀಧರ ಪೂಜಾರಿ ಸೇರಿದಂತೆ ಹಲವು ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಡೈನವೇಗಸ್ ಸ್ವಾಗತಿಸಿದರು. ದಾಕ್ಷಾಯಿನಿ ಪ್ರಾರ್ಥಿಸಿದರು. ಯಂ.ನಿಶ್ಮಿತಾ ರೈ ವಂದಿಸಿದರು. ಮೇಘನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here