ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಹುಸೇನ್ ಸಾಬ್ ಕನಕಗಿರಿಯವರಿಂದ ದಾಸ ಕೀರ್ತನೆ

0

ಈಶ್ವರಮಂಗಲ:ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನವರಾತ್ರಿ ಪ್ರಯುಕ್ತ ಹುಸೇನ್ ಸಾಬ್ ಕನಕಗಿರಿಯವರಿಂದ ದಾಸ ಕೀರ್ತನೆ ಕಾರ್ಯಕ್ರಮವು ನಡೆಯಿತು.

ವಿದ್ಯಾರಂಭವನ್ನು ಕ್ಷೇತ್ರದ ಅರ್ಚಕರಾದ ವಿನಾಯಕ ಭಟ್ ಇವರು ನೆರವೇರಿಸಿದರು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿಗಳಾದ ಶಿವರಾಂ ಪಿ ,ಶಿವರಾಂ ಶರ್ಮ ,ನಾಗರಾಜ್ ನಡವಡ್ಕ, ರಘುರಾಜ್ ಕೊನೆತೋಟ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here