ಸಮರ್ಥ ನಿಧಿಯಿಂದ ಉಚಿತ ದಂತ ವೈದ್ಯಕೀಯ ಶಿಬಿರ

0

ಪುತ್ತೂರು: ಸಮರ್ಥ ನಿಧಿಯ ದಶಮಾನೋತ್ಸವದ ಪ್ರಯುಕ್ತ ಗ್ರಾಹಕರಿಗೆ ಉಚಿತ ದಂತ ತಪಾಸಣೆ ಮತ್ತು ದಂತ ಶುಚಿಗೊಳಿಸುವ ವೈದ್ಯಕೀಯ ಶಿಬಿರವನ್ನು ಸಮರ್ಥ ನಿಧಿಯ ಎಪಿಎಂಸಿ ರಸ್ತೆಯಲ್ಲಿರುವ ಪಿಂಟೋ ಪ್ಲಾಜಾದಲ್ಲಿರುವ ಪ್ರಧಾನ ಕಚೇರಿಯಲ್ಲಿ ದೀಪ ಬೆಳಗುವುದರೊಂದಿಗೆ ಉದ್ಘಾಟಿಸಲಾಯಿತು.

ತಾರೀಕು 14-10-2024 ರಿಂದ 18-10-2024 ರವರೆಗೆ ಈ ವೈದ್ಯಕೀಯ ಶಿಬಿರವು ನಡೆಯಲಿದೆ.


ಕಾರ್ಯಕ್ರಮದಲ್ಲಿ ಸಂಸ್ಥೆಯ ಗ್ರಾಹಕರಾದ ಕೆಎಸ್ ರಾಮಕೃಷ್ಣ, ನಿವೃತ್ತ ಉಪತಹಶೀಲ್ದಾರ ನಾರಾಯಣ ನಾಯ್ಕ್, ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ ಕಾಶ್ಮೀರ್ ಡಿಸೋಜಾ, ಪ್ರಗತಿಪರ ಕೃಷಿಕ ರಘುಪತಿ ಪೈ, ಡೆಂಟಲ್ ಸ್ಟಾಪ್ ಕ್ಲಿನಿಕ್ಕಿನ ವೈದ್ಯ ಡಾಕ್ಟರ್ ನಿಶಿತ್ ಆರ್ ಕೆ ಹಾಗೂ ಡಾಕ್ಟರ್ ಶ್ರೀನಿಧಿ ವಿ ಎಚ್, ಸಮರ್ಥ ನಿಧಿಯ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಕುಮಾರ್ ಹಾಗೂ ಡೈರೆಕ್ಟರ್ ಬಾಲಕೃಷ್ಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮರ್ಥ ನಿಧಿಯ ಡಿವಿಜನಲ್ ಮ್ಯಾನೇಜರ್ ಹರೀಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮರ್ಥ ನಿಧಿಯ ಪುತ್ತೂರು ಶಾಖೆಯ ಬ್ರಾಂಚ್ ಮೆನೇಜರ್ ಸ್ವರೂಪ್ ಸ್ವಾಗತಿಸಿ, ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಕುಮಾರ್ ಮಾತನಾಡಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ ಮಾಡಿದರು.


ಅನೇಕ ಗ್ರಾಹಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗ್ರಾಹಕರು ಆಫೀಸಿನಿಂದ ಟೋಕನ್ ತೆಗೆದುಕೊಂಡು ಪಿಂಟೋ ಪ್ಲಾಜಾದಲ್ಲಿರುವ ಡೆಂಟಲ್ ಸ್ಟಾಪ್ ಕ್ಲಿನಿಕ್ ನಲ್ಲಿ ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here