ಕೆಮ್ಮಾರ: ಬೈಲುವಾರು ಭಜನೆ

0

ಕಡಬ: ದೇವಾಲಯಗಳ ಸಂವರ್ದನ ಸಮಿತಿ ಮಂಗಳೂರು ವಿಭಾಗ ಮತ್ತು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಮಾರ್ಗದರ್ಶನದಲ್ಲಿ ಕೆಮ್ಮಾರ ಜಗನ್ನಾಥ ಅವರ ಮನೆಯಲ್ಲಿ ಬೈಲುವಾರು ಭಜನೆ ನಡೆಯಿತು.


ಭಜನೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಕಡಬ ಸರಸ್ವತೀ ಸಮೂಹ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಅವರು, ಮನೆಗಳಲ್ಲಿನ ಮನಸ್ಸುಗಳ ಏಕತೆಗಾಗಿ ಎಲ್ಲಾ ಮನೆಗಳಲ್ಲಿ ಪ್ರತಿನಿತ್ಯ ಭಜನೆ ನಡೆಯಬೇಕು. ಭಜನೆ ಮೂಲಕ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳ ಅರಿವು ಮೂಡಿಸಬೇಕು. ಕೊಯಿಲ ಗ್ರಾಮದಲ್ಲಿ ಆರಂಭವಾದ ಬೈಲುವಾರು ಭಜನೆ ಪ್ರತಿ ತಿಂಗಳು ಪ್ರತಿ ಬೈಲಿನ ಓರ್ವರ ಮನೆಯಲ್ಲಿ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು. ಜಗನ್ನಾಥ ಕೆಮ್ಮಾರ, ರಾಘವ ಪಡೀಲು ಮಂಗಳೂರು ಉಪಸ್ಥಿತರಿದ್ದರು. ವಾಮನ ಬರಮೇಲು ಸ್ವಾಗತಿಸಿ, ನಿರೂಪಿಸಿದರು. ಪ್ರಕಾಶ್ ಕೆಮ್ಮಾರ ವಂದಿಸಿದರು.

LEAVE A REPLY

Please enter your comment!
Please enter your name here