ಪುತ್ತೂರು: ವಾಲ್ಮೀಕಿ ಜಯಂತಿಯನ್ನು ಸುದಾನ ಶಾಲೆಯಲ್ಲಿ ಅ.17ರಂದು ಆಚರಿಸಲಾಯಿತು. ವಿದ್ಯಾರ್ಥಿ ನಾಯಕ ಅನಿಶ್ ಎಲ್ ರೈ ರವರು ಮಹರ್ಷಿ ವಾಲ್ಮೀಕಿಯವರ ಕಿರು ಪರಿಚಯ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ದೀಪಬೆಳಗಿ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಸಹ ಶಿಕ್ಷಕಿ ಕವಿತಾ ಅಡೂರು ಮಹರ್ಷಿ ವಾಲ್ಮೀಕಿಯವರ ಜೀವನ ಚಿತ್ರಣವನ್ನು ಕಥೆಯೊಂದಿಗೆ ವಿವರಿಸಿ, ವಾಲ್ಮೀಕಿ ಜಯಂತಿ ಆಚರಣೆಯಿಂದ ಜೀವನದಲ್ಲಿ ಮೌಲ್ಯಗಳನ್ನು ರಕ್ಷಿಸಿ ಅಳವಡಿಸುವ ಮಹತ್ವವನ್ನು ಸವಿವರವಾಗಿ ತಿಳಿಸಿದರು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.