ಅ.23: ಹೋಟೆಲ್ ಸವಿರುಚಿ ಶುಭಾರಂಭ

0

ಪುತ್ತೂರು: ಪುತ್ತೂರು ಕೃಷ್ಣನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಕೀತನಯ ಕಾಂಪ್ಲೆಕ್ಸ್‌ನಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಉಪಹಾರ ಮಂದಿರ ಹೋಟೆಲ್ ಸವಿರುಚಿ ಅ.23ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.

ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ನಗರಸಭಾಧ್ಯಕ್ಷೆ ಲೀಲಾವತಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಚರ್ಚ್‌ನ ಪ್ರದಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಕೆಮ್ಮಾಯಿ ಬಿಜೆಎಂ ಮುದರ್ರಿಸ್ ಮುಈನುದ್ದೀನ್ ಮದನಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ ಜಗನ್ನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮಲ್ಲಿ ತಂದೂರಿ, ಚೈನೀಸ್, ನಾರ್ತ್, ಸೌತ್‌ಇಂಡಿಯನ್ ಖಾದ್ಯಗಳು ದೊರೆಯುತ್ತದೆ ಎಂದು ಮಾಲಕ ಶಿವಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here