ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಎಮ್, ಕಾರ್ಯದರ್ಶಿ ರವಿಕುಮಾರ್ ಪಿ ಕೈತಡ್ಕ

0

ಪುತ್ತೂರು: ಕುಲಾಲ ಸಮಾಜಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಎಮ್ ಮತ್ತು ಕಾರ್ಯದರ್ಶಿಯಾಗಿ ರವಿಕುಮಾರ್ ಪಿ ಕೈತಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.


ಇತ್ತೀಚೆಗೆ ಸಂಘದ ಕುಲಾಲ ಸಹಕಾರ ಭವನದಲ್ಲಿ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಗಣೇಶ್ ಕುಲಾಲ್, ಕೋಶಾಧಿಕಾರಿಯಾಗಿ ಚಿತ್ರ, ಜೊತೆ ಕಾರ್ಯದರ್ಶಿಯಾಗಿ ತೇಜಕುಮಾರ್ ಕುಲಾಲ್ ಎನ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕುಲಾಲ್ ಮುಕ್ವೆ, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಶೇವಿರೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ ಕುಲಾಲ್ ನಡುವಾಲ್, ಗೌರವ ಸಲಹೆಗಾರರಾಗಿ ಭಾಸ್ಕರ ಎಂ ಪೆರುವಾಯಿ ಮತ್ತು ಸಮಿತಿ ಸದಸ್ಯರಾಗಿ ನವೀನ್ ಕುಲಾಲ್, ಕೃಷ್ಣ ಮಚ್ಚಿಮಲೆ, ಜನಾರ್ದನ ಮೂಲ್ಯ ಸಾರ್ಯ, ಜಯರಾಮ ಕುಲಾಲ್ ಕೆ, ಯತೀಶ್ ಕುಲಾಲ್ ಕೊರ್ಮಂಡ, ಸೋಮನಾಥ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು.

ಮಹಾಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ನವೀನ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಜನಾರ್ಧನ ಮೂಲ್ಯ ಸಾರ್ಯ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಶೇಷಪ್ಪ ಕುಲಾಲ್ ಎಮ್ ಅವರು ಎಲ್ಲರ ಸಹಕಾರ ಕೋರಿದರು. ಜನಾರ್ದನ ಮೂಲ್ಯ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here