ಪಾಪೆಮಜಲು ನಿವಾಸಿ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು:ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಗೇರು ನೆಡುತೋಪು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರು ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೊಗೀಶ್‌ ಭಂಡಾರಿ(42.ವ) ಎಂದು ತಿಳಿದು ಬಂದಿದೆ. ಇವರು ಕಿನ್ನಿಂಗಾರಿನಲ್ಲಿ ಸೆಲೂನ್ ಅಂಗಡಿ ಹೊಂದಿದ್ದರು.

ವ್ಯಕ್ತಿಯೊಬ್ಬರು ಬೆಳಗಿನ ಜಾವ ಹಾಲು ‌ಕೊಂಡೊಯ್ಯುವ ವೇಳೆ ಪಕ್ಕದ ಕಾಡಿನಿಂದ ಮೊಬೈಲ್‌ ರಿಂಗೆಣಿಸುವ ಶಬ್ದ ಕೇಳಿಸಿತು. ಅದನ್ನು ಆಳಿಸಿಕೊಂಡು ಆ ಸ್ಥಳಕ್ಕೆ ತೆರಳಿದಾಗ ಯೊಗೀಶ್‌ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮೃತರು ತಾಯಿ ಯಮುನಾ, ಪತ್ನಿ ನಳಿನಿ, ಮಕ್ಕಳಾದ ಸಹನಾ ಮತ್ತು ಸಂಜನಾ, ಸಹೋದರರನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಆಗಮಿಸಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here