





ವಿಟ್ಲ: ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ನಿ. ವಿಟ್ಲ ಇದರ ಎರಡನೇ ಶಾಖೆಯು ಬಂಟ್ವಾಳ ತಾಲೂಕು ಮಂಚಿ ಕುಕ್ಕಾಜೆಯಲ್ಲಿ ಡಿ. 22 ರಂದು ಉದ್ಘಾಟನೆಗೊಳ್ಳಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ಕೃಷ್ಣಯ್ಯ ಕೆ ವಿಟ್ಲ,, ಜಯರಾಮ ಬಲ್ಲಾಳ್, ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಬಾಬು ಕೆ ವಿ, ನಿರ್ದೇಶಕರಾದ ಡಾ. ಗೀತಾಪ್ರಕಾಶ್ ಎ, ರಾಘವ ಪೂಜಾರಿ, ಲ ರಮೇಶ್ ಕುಮಾರ್ ಆರ್ ಎಸ್, ಮಾದವ ಪೂಜಾರಿ, ಸಂಜೀವ ಪೂಜಾರಿ ಎಂ ಎಸ್, ರವಿ ಬಿ ಕೆ, ಜಗದೀಶ್ ಪಾಣೆಮಜಲು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಂತ ಪಿ, ಪ್ರಮುಖರಾದ ಚಂದ್ರಹಾಸ ಸುವರ್ಣ, ಲಕ್ಷ್ಮಣ ಆರ್ ಎಸ್, ಮಮತ ಸಂಜೀವ ಪೂಜಾರಿ, ಜಯಪ್ರಕಾಶ್ ಪಾಣೆಮಜಲು ಮೊದಲಾದವರು ಉಪಸ್ಥಿತರಿದ್ದರು.















