ಅಂತರಾಷ್ಟ್ರೀಯ ಏರ್ ಇಂಡಿಯಾ ಗಗನಸಖಿಯಾಗಿ ಪುತ್ತೂರಿನ ದುರ್ಗಾಶ್ರೀ ರಾವ್ ಪದೋನ್ನತಿ

0

ಪುತ್ತೂರು: ಏರ್ ಇಂಡಿಯಾದಲ್ಲಿ ಗಗನಸಖಿಯಾಗಿರುವ ಪುತ್ತೂರು ಸಂಪ್ಯ ನಿವಾಸಿ ದುರ್ಗಾಶ್ರೀ ರಾವ್ ಅವರು ಅಂತರಾಷ್ಟ್ರೀಯ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಪದೋನ್ನತಿ ಹೊಂದಿದ್ದಾರೆ.

ದುರ್ಗಾಶ್ರೀ ರಾವ್ ಅವರು ಹಲವು ಸಮಯಗಳಿಂದ ವಿಸ್ತಾರ ಏರ್ ಲೈನ್ಸ್‌ನಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿಂದ ಅವರು ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದರು. ಇದೀಗ ಅವರು ಪದೋನ್ನತಿ ಹೊಂದಿದ್ದಾರೆ. ಇವರು ಸಂಪ್ಯ ನಿವಾಸಿ ಲಕ್ಷ್ಮೀ ಅವರ ಪುತ್ರಿ.

LEAVE A REPLY

Please enter your comment!
Please enter your name here