ಪುತ್ತೂರು: ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಮುಂದಿನ 5 ವರ್ಷದ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗಿದೆ.
3 ಸ್ಥಾನಗಳಿಗೆ ಅವಿರೋಧ ಆಯ್ಕೆ:
ಆಡಳಿತ ಮಂಡಳಿಯ 15 ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ದಿನೇಶ್ ಕುಮಾರ್, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಉಮೇಶ್ ಪೂಜಾರಿ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಕೆ.ಕವನ್ ನಾೖಕ್ ರವರು ಅವಿರೋಧ ಆಯ್ಕೆಯಾಗಿದ್ದರು.
11 ಸ್ಥಾನಗಳಿಗೆ ಚುನಾವಣೆ:
11 ಸ್ಥಾನಗಳಿಗೆ ಮಾ.2ರಂದು ಚುನಾವಣೆ ನಡೆಯಿತು. 9ಸಾಮಾನ್ಯ ಸ್ಥಾನಗಳಿಗೆ 13 ಅಭ್ಯರ್ಥಿಗಳು ಹಾಗೂ 2 ಮಹಿಳಾ ಸ್ಥಾನಗಳಿಗೆ 4 ಅಭ್ಯರ್ಥಿಗಳು ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ಅಂತಿಮಕಣದಲ್ಲಿದ್ದರು. ಸಾಮಾನ್ಯ ಸ್ಥಾನದಿಂದ ಕೊಡಂಗೆ ಬಾಲಕೃಷ್ಣ ನಾೖಕ್, ನಿತಿನ್ ಚಂದ್ರ ನಾೖಕ್, ಪುಷ್ಪರಾಜ್ ನಾೖಕ್, ರಘುನಾಥ ನಾೖಕ್, ಕೆ.ರತ್ನಾಕರ ನಾೖಕ್, ರಾಕೇಶ್ ಕುಮಾರ್, ವಿಜಯ ಕುಮಾರ್, ಶಿವ ಪ್ರಸಾದ್ ಎ., ಸದಾಶಿವ ನಾೖಕ್, ಸುಜಿತ್ ಕುಮಾರ್ ಕೆ., ಸುಧಾಕರ್ ಪಡೀಲು ಕೆ.ಜಿ, ಸಂತೋಷ್ ಕುಮಾರ್ ಎ., ಹರೀಶ್ ನಾೖಕ್ ರವರು ಸ್ಪರ್ಧಾ ಕಣದಲ್ಲಿದ್ದರು. ಚುನಾವಣೆಯಲ್ಲಿ ಸುಜಿತ್ ಕುಮಾರ್ ಕೆ., ಸಂತೋಷ್ ಕುಮಾರ್ ಎ., ಹರೀಶ್ ನಾೖಕ್, ಸದಾಶಿವ ನಾೖಕ್, ಸುಧಾಕರ್ ಪಡೀಲು ಕೆ.ಜಿ, ನಿತಿನ್ ಚಂದ್ರ ನಾೖಕ್, ರಾಕೇಶ್ ಕುಮಾರ್, ಕೆ.ರತ್ನಾಕರ ನಾೖಕ್, ರಘುನಾಥ ನಾೖಕ್ ರವರು ಅತೀ ಹೆಚ್ಚು ಮತ ಪಡೆದು ಗೆಲುವು ಪಡೆದಿದ್ದಾರೆ.
ಮಹಿಳಾ ಮೀಸಲು ಸ್ಥಾನದಿಂದ ನಳಿನಾಕ್ಷಿ ಎಚ್. ನಾೖಕ್, ಪುಷ್ಪಲತಾ ಕೆ.ವಿ, ವನಿತಾ ನಾೖಕ್ ಎಸ್., ಹೇಮಲತಾ ನಾೖಕ್ ಅಂತಿಮ ಕಣದಲ್ಲಿದ್ದರು. ಚುನಾಣೆಯಲ್ಲಿ ವನಿತಾ ನಾೖಕ್ ಎಸ್., ಹೇಮಲತಾ ನಾೖಕ್ ರವರು ಅತೀ ಹೆಚ್ಚು ಮತ ಪಡೆದು ಗೆಲುವು ಪಡೆದಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಆರ್ಹ ಅಭ್ಯರ್ಥಿ ಇಲ್ಲದ ಕಾರಣ ಸ್ಥಾನ ಖಾಲಿ ಉಳಿದಿದೆ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಛೇರಿ ಮಂಗಳೂರು ಇದರ ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್ ಎಂ.ಎಸ್. ಚುನಾವಣಾಧಿಕಾರಿಯಾಗಿದ್ದರು.