ನೆಟ್ಟಣಿಗೆಮುಡ್ನೂರು : ಎಂಡೋ ಸಂತ್ರಸ್ತೆ ಬಾವಿಗೆ ಬಿದ್ದು ಮೃತ್ಯು

0

ಪುತ್ತೂರು:ನೆಟ್ಟಣಿಗೆಮುಡ್ನೂರು ಗ್ರಾಮದ ಬೆದ್ರಾಡಿ ನಿವಾಸಿಯಾಗಿದ್ದ ಎಂಡೋಸಲ್ಫಾನ್ ಸಂತ್ರಸ್ತೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.‌


ಬೆದ್ರಾಡಿ ನಿವಾಸಿ ಮಹಮ್ಮದ್ ಎಂಬವರ 6ನೇ ಪುತ್ರಿ ಮಿಸ್ರಿಯಾ(24ವ)ರವರು ಮೃತಪಟ್ಟವರು.ಅವರು ಮದುವೆಯಾಗದೆ ಮಾನಸಿಕ ರೋಗಿ ಮತ್ತು ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದು ಮಾ.9ರಂದು ಮಹಮ್ಮದ್ ಅವರು ಪುತ್ರಿ ಮಿಸ್ರಿಯಾ ಅವರಲ್ಲಿ, ಮನೆಯ ಹಿಂಬದಿ ಇರುವ ಬಾವಿಗೆ ಅಳವಡಿಸಿರುವ ನೆಟ್ ಮೇಲಿನ ಕಸವನ್ನು ಸ್ವಚ್ಛಗೊಳಿಸುಂತೆ ತಿಳಿಸಿ ಗಾಳಿಮುಖ ಪೇಟೆಗೆ ಹೋಗಿದ್ದರು.ಮಧ್ಯಾಹ್ನ ವೇಳೆ ಮಿಸ್ರಿಯಾರವರು ನೆಟ್ಟನ್ನು ಸ್ವಚ್ಛಗೊಳಿಸುವ ಸಂದರ್ಭ ಆಯ ತಪ್ಪಿ ಬಾವಿಗೆ ಬಿದ್ದಿದ್ದರು.ನೆರೆಕರೆಯವರ ಸಹಾಯದಿಂದ ಮಿಸ್ರಿಯಾರವರನ್ನು ಬಾವಿಯಿಂದ ಮೇಲೆತ್ತಿ ನೋಡಿದಾಗ ಆಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮಿಸ್ರಿಯಾರವರು ಅವಿವಾಹಿತೆಯಾಗಿದ್ದು ಎಂಡೋಸಲ್ಫಾನ್ ಸಂತ್ರಸ್ತೆ ಜೊತೆಗೆ ಮಾನಸಿಕ ರೋಗಿಯೂ ಆಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here