ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಹಾಗೂ ಸಪ್ತಸ್ವರ ಸಂಗೀತ ಕಲಾ ಶಾಲೆ( ರಿ.) ಪುತ್ತೂರು ಜಂಟಿಯಾಗಿ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಮಾರ್ಚ್ 14ರಂದು ವರಾಳಿರಾಗದ ಪಂಚರತ್ನಕೃತಿಯ ಶಿಬಿರ ಆಯೋಜಿಸಿದ್ದರು. ಚೆನ್ನೈನ ಹಿರಿಯ ಪಿಟೀಲು ವಾದಕರಾದ ಮುಲ್ಲೈವಾಸಲ್ ಚಂದ್ರಮೌಳಿಯವರು ಸಂಪನ್ಮೂಲ ವ್ಯಕ್ತಿಯಾಗಿದ್ದ ಈ ಶಿಬಿರದಲ್ಲಿ ಪುತ್ತೂರಿನ ಹಾಗೂ ಆಸುಪಾಸಿನ ಅನೇಕ ಸಂಗೀತ ಗುರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ವಾನ್ ದೀಪಕ್ ಕುಮಾರ್ ಹಾಗೂ ರಮಾ ಪ್ರಭಾಕರ್ ಈ ಶಿಬಿರವನ್ನು ಆಯೋಜಿಸಿದ್ದರು.