ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜ್ಯಪುರಸ್ಕಾರ ಗೌರವ

0

ಪುತ್ತೂರು:ಬೆಂಗಳೂರಿನ ರಾಜಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆದ 2023-24 ನೇ ಸಾಲಿನ ಚತುರ್ಥ ಚರಣ ರಾಜ್ಯ ಪುರಸ್ಕಾರ ಪ್ರಶಸ್ತಿ ಸಮಾರಂಭದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯ ಬುಲ್ ಬುಲ್ ವಿದ್ಯಾರ್ಥಿನಿ ಅಮೃತ.ಜೆ.ಎನ್ (ಜಗದೀಶ್ ಅಮಿನ್ ಹಾಗೂ ಸರಿತಾ.ಎ ಇವರ ಪುತ್ರಿ )
ಗೈಡ್ ವಿದ್ಯಾರ್ಥಿನಿ ಸೌಂದರ್ಯ (ಶೋಭಾ ಇವರ ಪುತ್ರಿ) ಇವರು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯಮಟ್ಟದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯಪುರಸ್ಕಾರ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಇವರಿಗೆ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯ ಗುರು ಜಯಮಾಲಾ ವಿ ಎನ್ ರವರು ಅಭಿನಂದನೆ ಸಲ್ಲಿಸಿದ್ದಾರೆ. ಬುಲ್ ಬುಲ್ ಶಿಕ್ಷಕಿ ಅನಿತಾ ಹಾಗೂ ಗೈಡ್ ಶಿಕ್ಷಕಿ ರೇಷ್ಮಾ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here