ಮಾ.23 – 24: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

0

ವಿಟ್ಲ : ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಮಾ.23 ರಂದು ಪ್ರತಿಷ್ಟಾ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಹಾಗೂ ಅರ್ಧಏಕಾಹ ಭಜನೆ ನಡೆಯಲಿದೆ.


ಮಾ.23 ರಂದು ಬೆಳಗ್ಗೆ ೬.೦೦ ರಿಂದ ಸಾಯಂಕಾಲ ಗಂಟೆ ೬.೦೦ರವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ರಾತ್ರಿ ಗಂಟೆ ೮.೦೦ ಕ್ಕೆ ಮಂಗಳಾರತಿ , ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾ.24ರಂದು ರಾತ್ರಿ ೮ಕ್ಕೆ ಭಜನಾ ಮಂಡಳಿಯ ಅಧ್ಯಕ್ಷರಾದ ಕೃಷ್ಷಕಿಶೋರ್ ಭಟ್ ಪೆಲತ್ತಿಂಜರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ‌. ವಿಟ್ಲ ಶ್ರೀ ಚಂದ್ರನಾಥ ಸ್ವಾಮೀ ಬಸದಿಯ ಅಧ್ಯಕ್ಷರಾದ ಜಿತೇಶ್ ಜೈನ್, ಚಂದಳಿಕೆ ಭಾರತ್ ಶಾಮಿಯಾನ್ ಮಾಲಕರಾದ ಸಂಜೀವ ಪೂಜಾರಿ ಚಂದಳಿಕೆ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಧಾರ್ಮಿಕ ಮುಂದಾಳು ಎಸ್. ಬಾಲಕೃಷ್ಣ ಕಾರಂತ ಎರುಂಬುರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕತೆ ಎಡ್ಡೆಂಡು ತುಳು ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here