ಪುತ್ತೂರು: ಝರೊ ಟೈಲ್ ಝೋನ್ ಎ.3ರಂದು ಮಂಜಲ್ಪಡ್ಪು ಭಾರತ್ ಪೆಟ್ರೋಲಿಯಂ ಬಳಿಯ ಎಸ್.ಆರ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಎಸ್ಡಿಪಿಐ ರಾಜ್ಯ ನಾಯಕ ಅಬ್ದುಲ್ ಲತೀಫ್, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ಸೈಯದ್ಮಲೆ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಸುಲೈಮಾನ್ ಹಾಜಿ, ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ ಆನಂದ್, ಪುತ್ತೂರು ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕರೀಂ ದಾರಿಮಿ, ಪುತ್ತೂರು ಫೈವ್ಸ್ಟಾರ್ ಮಾಲಕ ಯುಸುಫ್ ಹಾಜಿ, ತಾಜ್ ಅಸೋಸಿಯೇಟ್ಸ್ನ ಸಿದ್ದೀಕ್ ಕೆ.ಎ, ಅಬ್ದುಲ್ ಹಮೀದ್ ಸಾಲ್ಮರ, ಮಧುರಾ ಸ್ಕೂಲ್ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕೆ.ಎಂ ಬಾವಾ ಹಾಜಿ ಕೂರ್ನಡ್ಕ, ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಝರೊ ಟೈಲ್ ಝೋನ್ನ ಆಡಳಿತ ಪಾಲುದಾರರಾದ ಮುಹಮ್ಮದ್ ವಾಕಿದ್ ಈಶ್ವರಮಂಗಲ ಹಾಗೂ ಅಹ್ಮದ್ ಮುಸ್ತಫ ಕುಂಬ್ರ ತಿಳಿಸಿದ್ದಾರೆ.