ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಶಿಬಿರ

0

ಶಿಬಿರ ಯಶಸ್ವಿಯಾಗಿ ನಡೆದಿದೆ-ಇಕ್ಬಾಲ್ ಹುಸೇನ್

ಪುತ್ತೂರು: ಸಮಾಜ ಕಾರ್ಯ ವಿಭಾಗ ಡಾ| ಎಂ.ವಿ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಂಡ್ ಮ್ಯಾನೇಜ್‌ಮೆಂಟ್ ವಿದ್ಯಾನಗರ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ (ಎಸ್.ಸಿ.ಐ) ಪುತ್ತೂರು ಲೀಜನ್ ಇವರ ಆಶ್ರಯದಲ್ಲಿ ಗ್ರಾಮೀಣ ಶಿಬಿರ -2025 ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಎ.7ರಂದು ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಾಪೆಮಜಲು ಪ್ರೌಢಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಜೀವ ರೈ ಕುತ್ಯಾಡಿ ಉದ್ಘಾಟಿಸಿ ಶುಭ ಹಾರೈಸಿದರು.


ನಿವೃತ್ತ ಸೈನಿಕ ಅಮ್ಮಣ್ಣ ರೈ ಡಿ ಪಾಪೆಮಜಲು, ಶಾಲಾ ಮುಖ್ಯಗುರು ಮೋನಪ್ಪ ಬಿ ಪೂಜಾರಿ, ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ಇದರ ಅಧ್ಯಕ್ಷೆ ಮಲ್ಲಿಕಾ ಜೆ ರೈ ಪುತ್ತೂರು, ಸದಸ್ಯೆ ಅನ್ನಪೂರ್ಣಿಮಾ ಆರ್ ರೈ ಕುತ್ಯಾಡಿ ಮುಂತಾದವರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಸ್ವಪ್ನಶೆಟ್ಟಿ ಸ್ವಾಗತಿಸಿದರು. ಮಯಾರ್ ಕೆ. ವಂದಿಸಿದರು. ವಿದ್ಯಾರ್ಥಿ ಡೆಸೀನಾ ಮೋಳ್ ನಿರೂಪಿಸಿದರು.


ಎ.10ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಪೆಮಜಲು ಪ್ರೌಢಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ಶಿಬಿರದಿಂದ ಬಹಳ ಪ್ರಯೋಜವಾಗಿದ್ದು ಯಶಸ್ವಿಯಾಗಿ ಸಮಾಪನಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಇದರ ನಿರ್ದೇಶಕಿ ಅನ್ನಪೂರ್ಣಿಮಾ ಆರ್ ರೈ ಕುತ್ಯಾಡಿ ಸಮಾರೋಪ ಭಾಷಣ ಮಾಡಿದರು.

ಅತಿಥಿಗಳಾಗಿ ಪ್ರಮುಖರಾದ ವಾಸು ಪೂಜಾರಿ, ಶಿವರಾಮ ಮಣಿಯಾಣಿ, ರಾಮದಾಸ ರೈ ಮದ್ಲ, ಸುಬ್ರಹ್ಮಣ್ಯ ಗೌಡ, ಸಂತೋಷ್ ಕುಲಾಲ್ ಕೌಡಿಚ್ಚಾರ್, ಮಲ್ಲಿಕಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭುವನ್ ಶೆಟ್ಟಿ ಹಾಗೂ ಭವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಸಹನಾ ವಂದಿಸಿದರು.

LEAVE A REPLY

Please enter your comment!
Please enter your name here