ಬೆಟ್ಟಂಪಾಡಿ ಬಿಲ್ವಗಿರಿ ಕ್ರೀಡಾಂಗಣದಲ್ಲಿ ಪುತ್ತೂರು ಬಂಟರ ಸಂಘದಿಂದ ಬಂಟರ ಕ್ರಿಕೆಟ್ ಪಂದ್ಯಾಟ

0

ಕ್ರೀಡಾ ಕ್ಷೇತ್ರದಲ್ಲೂ ಬಂಟ ಸಮಾಜದವರಿಂದ ಅದ್ಭುತವಾದ ಸಾಧನೆ- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಪುತ್ತೂರು ಬಂಟರ ಸಂಘದ ಆಶ್ರಯದಲ್ಲಿ 45 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ಬಂಟರ ಕ್ರಿಕೆಟ್ ಪಂದ್ಯಾಟ BUNT LEGEND CUP-2025 ಅನ್ನು ಎ.27ರಂದು ಬೆಟ್ಟಂಪಾಡಿ ಬಿಲ್ವಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.


ಮಧ್ಯಾಹ್ನ ಜರಗಿದ ಸಭಾ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಸ್ವಾಗತಿಸಿ, ಮಾತನಾಡಿ ಪುತ್ತೂರು ತಾಲೂಕಿನ ಬಂಟರ ಸಂಘದಿಂದ 45 ವರ್ಷ ಮೇಲ್ಪಟ್ಟ ಬಂಟರಿಗೆ ಪ್ರಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾಟವನ್ನು ಬೆಟ್ಟಂಪಾಡಿಯ ಸುಂದರವಾದ ಕ್ರೀಡಾಂಗಣದಲ್ಲಿ ಆಯೋಜಿಸಿ, ಯಶಸ್ಸು ಕಂಡಿದ್ದೇವೆ, 5 ತಂಡವನ್ನು ರಚಿಸಿ, 5 ತಂಡಕ್ಕೆ 5 ಜನ ಯಜಮಾನರು ಮತ್ತು ಕಪ್ತಾನರ ಆಯ್ಕೆಯನ್ನು ಮಾಡಿ, ಪ್ರತಿ ತಂಡಕ್ಕೆ 16 ಮಂದಿ ಸದಸ್ಯರನ್ನು ಆಯ್ಕೆಮಾಡಿ, ಅತ್ಯಂತ ರೋಚಕವಾದ ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿ, ಬಂಟ ಸಮಾಜದ ಸಂಘಟನೆಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಕಾಯಕಕ್ಕೆ ಮುಂದೆ ಬಂದು, ಯಶಸ್ಸಿ ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ್ದೇವೆ. ಕ್ರೀಡಾ ಕ್ಷೇತ್ರದಲ್ಲೂ ಬಂಟ ಸಮಾಜದವರು ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದ ಅವರು ಕ್ರಿಕೆಟ್ ಪಂದ್ಯಾಟವನ್ನು ಸಂಯೋಜನೆ ಮಾಡಿದ ದಯಾನಂದ ರೈ ಕೊರ್ಮಂಡರವರನ್ನು ನಾವು ಅಭಿನಂದಿಸಬೇಕು, ಜೊತೆಗೆ ಇದಕ್ಕೆ ಸಹಕಾರ ನೀಡಿದ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸಂತೋಷ್ ಶೆಟ್ಟಿ ಸಾಜ, ನಿತ್ಯಾನಂದ ಶೆಟ್ಟಿ ಮನವಳಿಕೆ, ತಿಲಕ್ ರೈ ಕುತ್ಯಾಡಿ ಹಾಗೂ ಸಹಕಾರವನ್ನು ನೀಡಿದ ಸರ್ವರನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್‍ಯಕ್ರಮವನ್ನು ಸಂಘದ ಮೂಲಕ ಹಮ್ಮಿಕೊಳ್ಳುತ್ತೇವೆ ಎಂದರು.

ಉತ್ತಮ ಆರೋಗ್ಯ- ದಂಬೆಕ್ಕಾನ ಸದಾಶಿವ ರೈ
ಬಂಟರ ಸಂಘದ ನಿರ್ದೆಶಕರಾದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈರವರು ಮಾತನಾಡಿ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೇತ್ರತ್ವದಲ್ಲಿ ಉತ್ತಮ ಕಾರ್‍ಯಕ್ರಮ ನಡೆದಿದೆ. ಕ್ರೀಡೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.

ಯಶಸು ಕಂಡಿದೆ- ಸಾಜ ರಾಧಾಕೃಷ್ಣ ಆಳ್ವ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ಉತ್ತಮವಾದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಸಂಘಟಕರ ಪ್ರಯತ್ನ ಇಲ್ಲಿ ಯಶಸು ಕಂಡಿದೆ ಎಂದರು.

ಕ್ರಿಕೆಟ್ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗಬೇಕು- ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಬಂಟ ಸಮಾಜದವರು ಕ್ರಿಕೆಟ್ ಆಟದಲ್ಲಿ ಬಹಳ ಮುಂದೆ ಇದ್ದ ಸಮಾಜವಾಗಿದ್ದು, ಕ್ರಿಕೆಟ್ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗಬೇಕು ಎಂದರು.

ಉತ್ತಮ ಪ್ರಯತ್ನ- ಬೂಡಿಯಾರ್ ರಾಧಾಕೃಷ್ಣ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ಕಾರ್‍ಯಕ್ರಮ ಉತ್ತಮ ಪ್ರಯತ್ನವಾಗಿದ್ದು, ಮುಂದಿನ ವರುಷ ಮೂರು ದಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ, ಮತ್ತಷ್ಟು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹವನ್ನು ನೀಡೋಣ ಎಂದರು.

ಉತ್ತಮವಾಗಿ ನಡೆದಿದೆ-ಎ ಕೆ ಜಯರಾಮ ರೈ
ಕೆಯ್ಯೂರು ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ ಕೆ ಜಯರಾಮ ರೈರವರು ಮಾತನಾಡಿ ಕ್ರಿಕೆಟ್ ಪಂದ್ಯಾಟ ಉತ್ತಮವಾಗಿ ನಡೆದಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು

ಹೊಸ ಕೊಡುಗೆ- ಗೀತಾ ಮೋಹನ್ ರೈ
ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈರವರು ಮಾತನಾಡಿ ಬಂಟರ ಸಂಘದ ಆಶ್ರಯದಲ್ಲಿ ನಡೆದ ಈ ಕಾರ್‍ಯಕ್ರಮ ಕ್ರೀಡಾ ಕ್ಷೇತ್ಕ್ಕೆ ಹೊಸ ಕೊಡುಗೆಯಾಗಿದೆ ಎಂದರು.

ಪೂರ್ಣ ಸಹಕಾರ ದೊರೆತಿದೆ- ಹರ್ಷಕುಮಾರ್ ರೈ ಮಾಡಾವು
ಯುವ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವುರವರು ಮಾತನಾಡಿ ಒಳ್ಳೆಯ ಕಾರ್‍ಯಕ್ರಮವನ್ನು ಆಯೋಜಿಸದ ಬಂಟರ ಸಂಘದ ಪ್ರಯತ್ನಕ್ಕೆ ಬಂಟ ಸಮಾಜದ ಕ್ರೀಡಾ ಪ್ರೇಮಿಗಳ ಪೂರ್ಣ ಸಹಕಾರ ದೊರೆತಿದೆ ಎಂದರು.

ಸನ್ಮಾನ ಸಮಾರಂಭ
ಬಂಟ ಸಮಾಜದ ಹಿರಿಯ ಆಟಗಾರರಾರನ್ನು ಹಾಗೂ ಬೆಟ್ಟಂಪಾಡಿ ಕ್ರೀಡಾಂಗಣದಲ್ಲಿ ಆಟ ಆಡುತ್ತಿದ್ದ ಬಂಟ ಆಟಗಾರರಾದ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ರೈ, ಸುಧಾಕರ್ ರೈ ಸೇರ್ತಾಜೆ, ಚಂದ್ರಶೇಖರ್ ರೈ ಆರಂತನಡ್ಕ, ಅಮರನಾಥ ರೈ ಆರಂತನಡ್ಕ, ಅಮ್ಮಣ್ಣ ರೈ ಪಾಪೆಮಜಲು, ವಿನೋದ್ ಕುಮಾರ್ ರೈ ಗುತ್ತು, ಶೇಷಪ್ಪ ರೈ ಮೂರ್ಕಾಜೆ, ಚಂದ್ರಶೇಖರ್ ರೈ ಬಾಲ್ಯೊಟ್ಟು ಹಾಗೂ ತಾರಾನಾಥ ರೈ ಗುಬ್ರಿಕಲ್ ರವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಬಂಟರ ಸಂಘದ ನಿಕಟಪೂರ್ವ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಉಪ್ಪಳಿಗೆ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಕುಡ್ಚಿಲ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು,ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಅರುಣಾ ಡಿ. ರೈ, ಕಾವು ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು ಮತ್ತಿರರು ಉಪಸ್ಥಿತರಿದ್ದರು.

ಕಾರ್‍ಯಕ್ರಮದ ಕ್ರೀಡಾ ಸಂಯೋಜಕರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನ್ಮಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ತಿಲಕ್ ರೈ ಕುತ್ಯಾಡಿ ವಂದಿಸಿದರು. ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ನಿರ್ದೇಶಕ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ, ನಿಕಟಪೂರ್ವ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿರವರುಗಳು ಅತಿಥಿಗಳನ್ನು ಗೌರವಿಸಿದರು.

ಉದ್ಗಾಟನಾ ಸಮಾರಂಭ
ಬೆಳಿಗ್ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಪಂದ್ಯಾಟಕ್ಕೆ ಚಾಲನೆ ನೀಡಿ, ಶುಭಹಾರೈಸಿದರು. ಬಂಟರ ಸಂಘದ ನಿಕಟಪೂರ್ವ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ , ಉದ್ಯಮಿ ಮನಮೋಹನ ರೈ ಚೆಲ್ಯಡ್ಕ, ಬಂಟರ ಸಂಘದ ನಿರ್ದೇಶಕ ಸದಾಶಿವ ರೈ ಸೂರಂಬೈಲು, ಮಾಜಿ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ, ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ಕ್ರೀಡಾ ಸಂಯೋಜಕ ದಯಾನಂದ ರೈ ಕೋರ್ಮಂಡ, ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಿಲಕ್ ರೈ ಕುತ್ಯಾಡಿರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.


5 ಜನ ಮಾಲಕರು, 5 ಜನ ಕಪ್ತಾನರು, 80 ಜನ ಆಟಗಾರರ ತಂಡ
ಪುತ್ತೂರು ಬಂಟರ ಸಂಘದಿಂದ ಬಂಟರ ಕ್ರಿಕೆಟ್ ಪಂದ್ಯಾಟ ಬೆಟ್ಟಂಪಾಡಿ ಬಿಲ್ವಗಿರಿ ಕ್ರೀಡಾಂಗಣ ದಲ್ಲಿ ಎ. 27ರಂದು ನಡೆಯಿತು. 5 ಜನ ಮಾಲಕರಿದ್ದು 80 ಜನ ಆಟಗಾರರ ತಂಡ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದರು. ಪ್ರಥಮ ಪಂದ್ಯ ಬಂಟ್ಸ್ ಟೈಟಾನ್ ತಂಡದ ಮಾಲಕರಾದ ಕಾವು ಹೇಮನಾಥ ಶೆಟ್ಟಿ, ತಂಡದ ಕಪ್ತಾನ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಬಂಟ್ಸ್ ರೊಯಲ್ಸ್ ತಂಡದ ಮಾಲಕರಾದ ಶಿವಪ್ರಸಾದ್ ಶೆಟ್ಟಿ ಕಿನಾರ, ತಂಡದ ಕಪ್ತಾನ ಸಂತೋಷ್ ಶೆಟ್ಟಿ ಸಾಜ, ಬಂಟ್ಸ್ ಛಾಲೆಂಜರ್ಸ್ ತಂಡದ ಮಾಲಕರಾದ ಸೂರ್ಯನಾಥ ಆಳ್ವ, ತಂಡದ ಕಪ್ತಾನ ಪ್ರವೀಣ್ ಕುಮಾರ್ ಶೆಟ್ಟಿ, ಬಂಟ್ಸ್ ಸ್ಟ್ರೈಕರ್ಸ್ ತಂಡದ ಮಾಲಕರಾದ ಪುರಂದರ ಶೆಟ್ಟಿ ಮಿತ್ರಂಪಾಡಿ, ತಂಡದ ಕಪ್ತಾನ ದಯಾನಂದ ರೈ ಕೋರ್ಮಂಡ, ಬಂಟ್ಸ್ ರೈಡರ್ಸ್ ತಂಡದ ಮಾಲಕರಾದ ಸತೀಶ್ ರೈ ಕಟ್ಟಾವು, ತಂಡದ ಕಪ್ತಾನ ತಿಲಕ್ ರೈ ಕುತ್ಯಾಡಿರವರುಗಳ ತಂಡದಿಂದ ಕ್ರಿಕೆಟ್ ಪಂದ್ಯಾಟ ಜರಗಿತು.

ಅಚ್ಚುಕಟ್ಟಾದ ವ್ಯವಸ್ಥೆ
ಬಂಟರ ಸಂಘದ ನೇತ್ರತ್ವದಲ್ಲಿ ಬಂಟ್ ಲೇಜಿಂಡ ಕಪ್ ಕ್ರಿಕೆಟ್ ಪಂದ್ಯಾಟ ಅದ್ಭುತವಾದ ಯಶಸ್ಸು ದೊರೆತಿದೆ. ಕಾರ್‍ಯಕ್ರವನ್ನು ಸಂಘಟಕರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಬೆಳಿಗ್ಗೆ ಉಪಹಾರ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿ ಧ್ಯಾನ್ ರೈರವರ ವೀಕ್ಷಕ ವಿವರಣೆಯನ್ನು ನಿರೂಪಿಸುತ್ತಿದ್ದ ರೀತಿ ಪ್ರೇಕ್ಷಕರಿಗೆ ಖುಷಿನೀಡಿತು.

LEAVE A REPLY

Please enter your comment!
Please enter your name here