ಸವಣೂರು : ಆರೇಲ್ತಡಿ ದೈವಸ್ಥಾನದಲ್ಲಿ ಪ್ರತಿಷ್ಠೆ ,ಬ್ರಹ್ಮಕಲಶ,ನೇಮೋತ್ಸವ -ವಿವಿಧ ಧಾರ್ಮಿಕ ಕಾರ್ಯಕ್ರಮ

0

ಮೇ.14 : ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ

ಸವಣೂರು : ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಟೆ ,ಬ್ರಹ್ಮಕಲಶ- ನೇಮೋತ್ಸವವು ಮೇ.12 ರಿಂದ ಮೇ.16ರವರೆಗೆ ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಮೇ.12ರಂದು ರಾತ್ರಿ ತಂತ್ರಿಗಳ ಆಗಮನ,ರಾತ್ರಿ ಸಾಮೂಹಿಕ ಪ್ರಾರ್ಥನೆ,ಆಚಾರ್ಯ ವರಣ,ಪ್ರಾಸಾದ ಪರಿಗ್ರಹ,ಪುಣ್ಯಾಹ ಪ್ರಾಸಾದ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮೇ.13ರಂದು ಬೆಳಿಗ್ಗೆ ಗಣಪತಿ ಹವನ,ಭಗವತಿ ಪೂಜೆ,ಬಿಂಬ ಶುದ್ದಿ,ಕಲೆ ಶುದ್ದಿ,ಅನುಜ್ಞಾ ಕಲಶ,ಶಯ್ಯಾ ಪೂಜೆ,ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ,ಶಯ್ಯೆಯಲ್ಲಿ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಅಧಿವಾಸ ಪೂಜೆ, ಕಲಶ ಪೂಜೆ, ಭಗವತಿ ಸೇವೆ, ಜ್ಞಾನಾಧಿವಾಸ,ಅಧಿವಾಸ ಪೂಜೆ ನಡೆಯಿತು.

ಈ ಸಂಧರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಶ್ರೀಮತಿ ಸುಮನ ಮುರಳಿಮೋಹನ ಶೆಟ್ಟಿ ,ಶಿವಪ್ರಸಾದ್ ಶೆಟ್ಟಿ ಕಿನಾರ ಅಧ್ಯಕ್ಷ ದಿನೇಶ್ ಮೆದು,ಪ್ರಧಾನ ಕಾರ್ಯದರ್ಶಿ : ಚಂದ್ರಶೇಖರ ಪಟ್ಟೆ,ಗೌರವ ಸಲಹೆಗಾರರಾದ ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು,ರಾಜೇಂದ್ರ ರೈ ಮಿಜಾರುಗುತ್ತು,ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ದಯಾಸಾಗರ್ ಪೂಂಜಾ ಮುಗೇರುಗುತ್ತು,ಸದಾಶಿವ ರೈ ಅಜಲಾಡಿಬೀಡು,ಪದ್ಮನಾಭ ಕುಂಜತ್ತಾಯ ಅರ್ಚಕರು,ದಯಾ ವಿ. ರೈ, ಶಿವಣ್ಣ ಗೌಡ ಇಡ್ಯಾಡಿ,ಗಿರೀಶ್ ಮೆದು, ಪ್ರವೀಣ್ ನ್ಯಾಕ್ ಕಂಪ, ಸುಬ್ರಹ್ಮಣ್ಯ ರಾವ್ ಅತಿಕರಯ, ರಾಜಾರಾಮ ಪ್ರಭು, ಅಶ್ವಿನಿ ಫಾರ್ಮ್ಸ್, ರಾಕೇಶ್ ರೈ ಕೆಡೆಂಜಿ,ತಾರಾನಾಥ ಕಾಯರ್ಗ,ಕೋಶಾಧಿಕಾರಿ ರಾಜೇಶ್ ಇಡ್ಯಾಡಿ,ಜತೆ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ,ಉಪಾಧ್ಯಕ್ಷರಾದ ವಾಸುದೇವ ಇಡ್ಯಾಡಿ ಮೋನಪ್ಪ ಗೌಡ ಆರೇಲ್ತಡಿ, ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಚಂದಪ್ಪ ಪೂಜಾರಿ ಊರುಸಾಗು, ಹರಿಶ್ಚಂದ್ರ ಕಾಯರ್ಗ,ಸದಸ್ಯರಾದ ಸಂಜೀವ ಪೂಜಾರಿ ಅಗರಿಗುತ್ತು, ನಾರಾಯಣ ಗೌಡ ಪೂವ,ಪರಮೇಶ್ವರ ಮಡಿವಾಳ,ವಿಠಲ ಶೆಟ್ಟಿ ಕೆಡೆಂಜಿ,ಮೋನಪ್ಪ ಗೌಡ ಇಡ್ಯಾಡಿ
,ಪೂವಪ್ಪ ಗೌಡ ಸೋಂಪಾಡಿ, ಸುಂದರ ಪೂಜಾರಿ ಮಡಕೆ,ವಿಶ್ವನಾಥ ಪೂಜಾರಿ ಏರ್ತಿಲ,ಕುಶಾಲಪ್ಪ ಗೌಡ ಇಡ್ಯಾಡಿ,ಚಂದ್ರಶೇಖರ ಮೆದು,ನಾರಾಯಣ ಕೆಡೆಂಜಿಮಾರು,ಕುಂಞ ನಲಿಕೆ ಆರೇಲ್ತಡಿ,ಪುಟ್ಟಣ್ಣ ನಾಯ್ಕ ಕೆಡೆಂಜಿ,ಉಮೇಶ್ ಆಚಾರ್ಯ ಚಾಪಲ್ಲ,ಪ್ರಭಾಕರ ಶೆಟ್ಟಿ ನಡುಬೈಲು,ಮೋಹನ ರೈ ಕೆರೆಕ್ಕೋಡಿ, ತೀರ್ಥರಾಮ ಕೆಡೆಂಜಿ,ಪ್ರಕಾಶ್ ಕುದ್ಮನಮಜಲು,ದಿವಾಕರ ಬಸ್ತಿ,ಆನಂದ ಕೇಕುಡೆ,ಬಾಬು ಮುಗೇರು,ಸಂಜೀವ ಭಂಡಾರಿ ನಡುಬೈಲು,ಗಂಗಾಧರ ಪೆರಿಯಡ್ಕ,ಬಾಲಚಂದ್ರ ರೈ ಕೆರೆಕೋಡಿ,ಮಿಥುನ್ ಅಗರಿ,ರಾಜೇಶ್ ರೈ ಮುಗೇರು,ಗಿರಿಧರ ಇಡ್ಯಾಡಿ,ಯೋಗೀಶ್ ಕಾಯರ್ಗ,ರಾಜ್ ದೀಪಕ್ ಶೆಟ್ಟಿ ಮಠ,ರಾಜೀವಿ ಶೆಟ್ಟಿ ಕೆಡೆಂಜಿ ಮೊದಲಾದವರಿದ್ದರು.

ಮೇ.14ರಂದು ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ
ಮೇ.14ರಂದು ಬೆಳಿಗ್ಗೆ ಪ್ರಾಸಾದ ಶುದ್ದಿ,ಪೀಠ ಪ್ರತಿಷ್ಠೆ, ಬೆಳಿಗ್ಗೆ 6.30ರಿಂದ 7.03ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ,ಕಲಶಾಭಿಷೇಕ ,ತಂಬಿಲ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ದೈವಗಳ ಭಂಡಾರ ತೆಗೆಯಲಾಗುವುದು.

ಮೇ.15ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಶ್ರೀ ಕೆಡೆಂಜೊಡಿತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ಸಂಜೆ ಶ್ರೀ ಪಂಜುರ್ಲಿ ಹಾಗೂ ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.ಮೇ.16ರಂದು ಸಂಜೆ 6ರಿಂದ ಮುಗೇರಿನಿಂದ ಗುಳಿಗ ಮಾರಿ ಹೊರಟು ಮಾಂತೂರಿನಲ್ಲಿ ಶಿರಾಡಿ ದೈವದ ನೇಮವಾಗಿ ಸರ್ವೆಯಲ್ಲಿ ಮಾರಿ ಬಿಡುವುದು ನಡೆಯಲಿದೆ.

LEAVE A REPLY

Please enter your comment!
Please enter your name here