ಬಾಲಕಿಯೊಂದಿಗೆ ಅನುಚಿತ ವರ್ತನೆ – ಆರೋಪಿ ವಶ

0

ಪುತ್ತೂರು: ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಪುತ್ತೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಹಾಗೂ ಬಸ್ ನಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಕುರಿತು ವರದಿಯಾಗಿದೆ.

ಸೋಮವಾರಪೇಟೆಯ ಕುಟುಂಬವೊಂದು ಪುತ್ತೂರು ಬಸ್ ನಲ್ಲಿ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಪುತ್ತೂರಿನಲ್ಲಿ ಬಸ್ ಏರಿದ ಪಾಣಾಜೆಯ ಅಬ್ದುಲ್ ಕುಂಞಿ ಎಂಬವರು ಬಸ್ ನಲ್ಲಿದ್ದ ಸೋಮವಾರಪೇಟೆಯ ಬಾಲಕಿಯ ಮೈ ಮುಟ್ಟಿದನೆನ್ನಲಾಗಿದೆ. ಇದನ್ನು‌ಬಾಲಕಿ ಆಕ್ಷೇಪಿಸಿ ಬಸ್ ನಲ್ಲಿದ್ದ ತನ್ನ ಮನೆಯವರಿಗೆ ತಿಳಿಸಿದರು. ಆ ವ್ಯಕ್ತಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು‌ ಬಸ್ ನಲ್ಲಿಧ್ದವರು ನೋಡಿದ್ದರೆಂದು ಬಳಿಕ ಆತನನ್ನು ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಅಬ್ದುಲ್ ಕುಂಞಿಯನ್ನು ವಶಕ್ಕೆ ಪಡೆದಿರುವ ಸುಳ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here