ಪಟ್ಟೆ – ಗೆಜ್ಜೆಗಿರಿ-ಪುಳಿತ್ತಡಿ ಸಂಪರ್ಕ ರಸ್ತೆ ಕೆಸರುಮಯ

0

ಬಡಗನ್ನೂರು: ಪಟ್ಟೆ – ಗೆಜ್ಜೆಗಿರಿ-ಪುಳಿತ್ತಡಿ ಜಿ. ಪಂ ಸಂಪರ್ಕ ರಸ್ತೆಯ ಕುದುರೆಮಜಲು ಎಂಬಲ್ಲಿ ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲದೆ ಗುಡ್ಡ ಪ್ರದೇಶದಿಂದ ಇಳಿದು ಬಂದ ಮಳೆಯ ನೀರು ಮತ್ತು ಮಣ್ಣು ರಸ್ತೆಯಲ್ಲಿ ತುಂಬಿ ಜಲಾವೃತ್ತಗೊಂಡು ರಸ್ತೆ ಇಡೀ ಕೆಸರುಮಯವಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಇದರಿಂದ ಈ ಬಾಗದಲ್ಲಿ ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಸಾಮಾಗ್ರಿಗಳನ್ನು ತರುವಲ್ಲಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ.ದ್ವಿಚಕ್ರ ಸವಾರರು ವಾಹನ ಸಂಚರಿಸುವಲ್ಲಿ ಹರಸಾಹಸಪಡುವ ಪರಿಸ್ಥಿತಿ ಎದುರಾಗಿದೆ.ಈ ಬಗ್ಗೆ ಇಲಾಖಾಧಿಕಾರಿಗಳು, ಹಾಗೂ ಜನಪ್ರತಿನಿದಿನಗಳು ಗಮನಿಸಿ ಸೂಕ್ತ ಕ್ರಮ ಕೖೆಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here