ಪುತ್ತೂರು: ಪಂಚಮಿ ಹೊಟೇಲ್ ನವರ ಐದನೇ ಸಂಸ್ಥೆ ಪಂಚಮಿ ಚಿಕನ್ ಸೆಂಟರ್ ಮೇ.30ರಂದು ನೆಹರು ನಗರದ ಆಟೋ ರಿಕ್ಷಾ ನಿಲ್ದಾಣದ ಬಳಿ ಶುಭಾರಂಭಗೊಂಡಿತು.
ಮ್ಹಾಲಕರ ತಾಯಿ ಗುಲಾಬಿಯವರು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿ ನಗರ ಸಭಾ ಸದಸ್ಯ ಪದ್ಮನಾಭ ಪಡೀಲು ಮಾತನಾಡಿ, ಪಂಚಮಿ ಹೊಟೇಲ್ ನವರ ಐದನೇ ಸಂಸ್ಥೆ ಪ್ರಾರಂಭಗೊಂಡಿದೆ. ಬಹಳಷ್ಟು ಶ್ರಮ ಜೀವಿಗಳು ಹಾಗೂ ಅಪಾರ ದೈವ ಭಕ್ತರಾಗಿರುವ ಮ್ಹಾಲಕರಿಗೆ ದೇವರ ಅನುಗ್ರಹದಿಂದ ಅಭಿವೃದ್ಧಿಯತ್ತ ಸಾಗಿದ್ದಾರೆ.
ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರ
ಶ್ರಮಜೀವಿಗಳು ದೊರೆತಿದ್ದು ಅಭಿವೃದ್ಧಿಗೆ ಸಹಕಾರಿಯಾಗಿದೆ. ಇವರಿಂದ ಇನ್ನಷ್ಟು ಸಂಸ್ಥೆಗಳು ಪ್ರಾರಂಭವಾಗಲಿ ಎಂದು ಹಾರೈಸಿದರು.
ಶ್ಯಾಮಸುಂದರ ಪಡ್ಡಾಯೂರು ಹಾಗೂ ಚಂದ್ರಾವತಿಯವರು ಮಾತನಾಡಿ, ಬಡತನದಿಂದ ಮೇಲೆ ಬಂದಿರುವ ಸಂಸ್ಥೆ ಇನ್ನಷ್ಟು ಬೆಲೆಯಲಿ ಎಂದು ಶುಭ ಹಾರೈಸಿದರು.
ನಿತೇಶ್ ಪಡೀಲು, ಲೋಕಯ್ಯ ನಾಯ್ಕ್, ಸುಶೀಲಾ, ಶಶಿಕಲಾ, ನಿಖಿಲ್ ಪಡ್ಡಾಯೂರುಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಮ್ಹಾಲಕ ಸಂತೋಷ್ ಸ್ವಾಗತಿಸಿ, ನಮ್ಮಲ್ಲಿ ಬ್ರಾಯಿಲರ್, ಟೈಸನ್, ಹಾಗೂ ಊರಿನ ಕೋಳಿಗಳು ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿದೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.