ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಬ್ಲಾಕ್ ಕಾಂಗ್ರೆಸ್‌ನಿಂದ ಸನ್ಮಾನ

0

ಪುತ್ತೂರು: ಕಳೆದ ಒಂದು ವರ್ಷದಿಂದ ಪುತ್ತೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ, ಮೇ.31ರಂದು ನಿವೃತ್ತರಾಗಲಿರುವ ಪುರಂದರ ಹೆಗ್ಡೆಯವರನ್ನು ಬ್ಲಾಕ್ ಕಾಂಗ್ರೆಸ್‌ನಿಂದ ಮೇ.30ರಂದು ಸನ್ಮಾನಿಸಿದರು.

ಸನ್ಮಾನಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಪುತ್ತೂರಿನಲ್ಲಿ ಬಹಳಷ್ಟು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ, ಮಾದರಿಯಾಗಿರುವ ತಹಶೀಲ್ದಾರ್‌ರವರನ್ನು ಸಾರ್ವಜನಿಕರ ಪರವಾಗಿ ಪಕ್ಷದಿಂದ ಸನ್ಮಾನಿಸಲಾಗುತ್ತಿದೆ. ಉತ್ತಮ ಜನಸೇವೆ ಮಾಡಿದ ಪ್ರತಿಫಲ ದೊರೆಯಲಿ ಎಂದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈಯವರು ಅಭಿವೃದ್ಧಿ ಕಾರ್ಯದಲ್ಲಿ ಮುತುವರ್ಜಿಯಿಂದ ಕೆಲಸ ನಿರ್ವಹಿಸಿದ್ದಾರೆ. ಪುತ್ತೂರಿನಲ್ಲಿ ಜನ ಮೆಚ್ಚುಗೆಯ ಸೇವೆ ಸಲ್ಲಿಸಿದ್ದಾರೆ. ನಮ್ಮ ನಿರೀಕ್ಷೆಗಿಂತ ಹೆಚ್ಚು ಕೆಲಸ ಮಾಡಿದ್ದು ಮುಂದೆ ಬರುವವರಿಗೆ ಮಾದರಿಯಾಗಿದ್ದಾರೆ ಎಂದರು.
ಪಕ್ಷದ ಪ್ರಮುಖರಾದ ಶಿವರಾಮ ಆಳ್ವ, ಉಮೇಶ್ ನಾಡಾಜೆ, ರೋಷಣ್ ರೈ ಬನ್ನೂರು, ರವಿ ಪ್ರಸಾದ್ ಶೆಟ್ಟಿ ಬನ್ನೂರು, ಪೂರ್ಣೇಶ್ ಕುಮಾರ್, ಶರೂನ್ ಸಿಕ್ವೇರಾ, ಸತೀಶ್, ವಿಲ್ಮಾ ಗೊನ್ಸಾಲ್ವೀಸ್, ವಿಶ್ವಜಿತ್ ಅಮ್ಮುಂಜ, ಶ್ರೀಧರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here