ನಾಳೆ ಮೇ.31ಕ್ಕೆ ಪುತ್ತೂರಿನಲ್ಲಿ ವಿದ್ವಾನ್ ಎ.ಎಸ್ ಮುರಳಿ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ

0


ಪುತ್ತೂರು: ಕಲಾಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿರುವ ವಿದ್ವಾನ್ ಎ.ಎಸ್ ಮುರಳಿ ಚೆನ್ನೈ ಅವರ ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯು ಮೇ 31ರಂದು ಸಂಜೆ ಗಂಟೆ 6 ರಿಂದ ಪುತ್ತೂರು ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ.

ಧನ್ವಂತರಿ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎ.ಎಸ್ ಮುರಳಿ ಚೆನ್ನೈ ಅವರ ಹಾಡುಗಾರಿಕೆಯಲ್ಲಿ ವೈವೇಲಿ ನಾರಾಯಣನ್ ಚೆನ್ನೈ ಅವರು ಮೃದಂಗದಲ್ಲಿ, ಬೆಂಗಳೂರಿನ ವಿದುಷಿ ವಿ ನಳಿನಾ ಮೋಹನ್ ಅವರು ವಯೋಲಿನ್‌ನಲ್ಲಿ, ಸಿ.ಪಿ.ವ್ಯಾಸವಿಠಲ ಅವರು ಖಂಜೀರದಲ್ಲಿ ಸಹಕರಿಸಲಿದ್ದಾರೆ. ಮೇ 31 ಮತ್ತು ಜೂ. 1ರಂದು ಬೆಳಗ್ಗೆ ಗಂಟೆ9.30 ರಿಂದ ಮಧ್ಯಾಹ್ನ ಗಂಟೆ 3ರ ತನಕ ಎ.ಎಸ್ ಮುರಳಿ ಚೆನ್ನೈ ಅವರಿಂದ ಶಾಸ್ತ್ರೀಯ ಸಂಗೀತ ಕಲಿಕಾ ಶಿಬಿರ ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಡಾ. ರವಿಪ್ರಕಾಶ್ ಕಜೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here