ಭಾರೀ ಮಳೆಗೆ ಕರೆಮನೆಯಲ್ಲಿ ಗುಡ್ಡ ಕುಸಿತ ಸೋಲಾರ್‌ಗೆ ಹಾನಿ – ನೆಲಕ್ಕುರುಳಿದ ಮರಗಳು ಅಂದಾಜು 6 ಲಕ್ಷ ರೂ ನಷ್ಟ

0

ಪುತ್ತೂರು: ಭಾರೀ ಮಳೆಗೆ ಅಲ್ಲಲ್ಲಿ ಅನೇಕ ಅವಾಂತರಗಳು ನಡೆದಿದ್ದು ಕರೆಮನೆ ಲೋಕಪ್ಪ ಗೌಡ ಅವರ ಮನೆಯ ಬಳಿ ಗುಡ್ಡ ಜರಿದು ಸೋಲಾರ್ ಶೆಡ್‌ಗೆ ಹಾನಿಯಾಗಿದೆ, ಅಲ್ಲದೇ ರಬ್ಬರ್ ಮರ, ಅಡಿಕೆ ಮರ, ತೆಂಗು ನೆಲಕ್ಕುರುಳಿದ್ದು ಅಪಾರ ನಷ್ಟ ಸಂಭವಿಸಿದೆ.


ಗುಡ್ಡ ಜರಿದ ಪರಿಣಾಮ ಅಡಿಕೆ ಒಣಗಿಸಲು ಉಪಯೋಗಿಸುವ ಸೋಲಾರ್ ಶೆಡ್ ಹಾಗೂ ಸಮೀಪವೇ ಇರುವ ಗ್ರೀನ್‌ಹೌಸ್‌ಗೂ ಭಾರೀ ಹಾನಿ ಸಂಭವಿಸಿದೆ. ಗುಡ್ಡ ಕುಸಿತದ ಪರಿಣಾಮ ಸೋಲಾರ್ ಶೆಡ್‌ನೊಳಗೆ ಮಣ್ಣು ರಾಶಿ ಬಿದ್ದಿದ್ದು ಅಸ್ತವ್ಯಸ್ತಗೊಂಡಿದೆ. ಮಾತ್ರವಲ್ಲದೇ ಸುಮಾರು 30 ಅಡಿಕೆ ಮರ, 10 ರಬ್ಬರ್ ಮರ ಹಾಗೂ ಮೂರು ತೆಂಗಿನ ಮರ ನೆಲಕ್ಕುರುಳಿದೆ. ಘಟನೆಯಿಂದ ರೂ.6 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here